February 22, 2026

Newsnap Kannada

The World at your finger tips!

kalarbugi , News , Drought

ರಾಗಿ ಖರೀದಿಗೆ ಹಣ ಬಿಡುಗಡೆ ಮಾಡುವಂತೆ ಮಾಜಿ ಸಚಿವ ಚಲುವರಾಯಸ್ವಾಮಿ ಆಗ್ರಹ

Spread the love

ರೈತರಿಂದ ಸರ್ಕಾರ ಖರೀದಿಸಿರುವ ರಾಗಿಯ ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪೆಬ್ರವರಿ ಅಂತ್ಯದವರೆಗೆ ರೈತರಿಗೆ ಹಣ ಪಾವತಿಸಲಾಗಿದೆ. ಇನ್ನೂ ಮೂರು ತಿಂಗಳು ಬಾಕಿ 400 ಕೋಟಿ ರುಗಳನ್ನು ರಾಜ್ಯದ ರೈತರ ಬಾಕಿ ಕೊಡಬೇಕಿದೆ. ಇದರಲ್ಲಿ ಮಂಡ್ಯ ಜಿಲ್ಲಾ ರೈತರ ಬಾಕಿಯೇ15 ಕೋಟಿ ಇದೆ . ಒಂದುವರೆ ತಿಂಗಳಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ರೈತರ ರಾಗಿ ಖರೀದಿಯ ಬಾಕಿ ಮೊತ್ತವನ್ನು ಸರ್ಕಾರ ಕೇಂದ್ರದಿಂದ ಅಥವಾ ರಾಜ್ಯ ಸರ್ಕಾರ ನೀಡುವಂತೆ ಒತ್ತಾಯಿಸಿದ್ದಾರೆ.

ಕೃಷಿ ಚಟುವಟಿಕೆ ಸಂಬಂಧ ಗೊಬ್ಬರ,ಬೀಜ,ಔಷಧ ಖರೀದಿಗಾಗಿ ನಗರಕ್ಕೆ ಬರುವ ರೈತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳು ಪೋಲೀಸ್ ಇಲಾಖೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ತಿಳಿಸಿದ್ದಾರೆ.

error: Content is protected !!