ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ

Team Newsnap
1 Min Read

ಹೈದ್ರಾಬಾದ್ :

ಆಂಧ್ರ ಪ್ರದೇಶದ ಮಾಜಿ ಸಿಎಂ ಹಾಗೂ ತೆಲುಗು ದೇಶಂ ಮುಖ್ಯಸ್ಥ ಎನ್​.ಚಂದ್ರಬಾಬು ನಾಯ್ಡು ಅವರನ್ನು ಕಳೆದ ಮಧ್ಯರಾತ್ರಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದಲ್ಲಿ ಸ್ಕಿಲ್ ಡವೆಲಪ್​ಮೆಂಟ್ ಯೋಜನೆಯಲ್ಲಿ 371 ಕೋಟಿ ರು ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿದಂತೆ ಆಂಧ್ರ ಹೈಕೋರ್ಟ್​ ಆದೇಶ ಹಿನ್ನೆಲೆಯಲ್ಲಿ ಎನ್​ ಚಂದ್ರಬಾಬು ನಾಯ್ಡುರನ್ನು ಬಂಧಿಸಿದ್ದಾರೆ.

ಸ್ಕಿಲ್ ಡವೆಲಪ್​ಮೆಂಟ್ ಯೋಜನೆಯಲ್ಲಿ ಅಕ್ರಮದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಎ1 ಆರೋಪಿಯಾಗಿದ್ದಾರೆ 2020ರ ಪ್ರಕರಣದ ಬಗ್ಗೆ ಹೈಕೋರ್ಟ್​ ಆದೇಶ ನೀಡಿದ್ದರಿಂದ ಸಿಐಡಿ ಪೊಲೀಸರು ಮಾಜಿ ಸಿಎಂ ಎನ್​.ಚಂದ್ರಬಾಬು ನಾಯ್ಡುರನ್ನು ಐಪಿಸಿ ಸೆಕ್ಷನ್ 166, 167, 418, 420​ ಪ್ರಕಾರ ಬಂಧಿಸಿದ್ದಾರೆ.

ಚಂಧ್ರಬಾಬು ಬಂಧನದ ಹಿನ್ನೆಲೆಯಲ್ಲಿ ಟಿಡಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ನೂರಾರು ಕಾರ್ಯಕರ್ತರು ಅವರ ನಿವಾಸದ ಬಳಿ ಸೇರಿದ್ದಾರೆ ಎನ್ನಲಾಗಿದೆ.

ಎಫ್​ಐಆರ್ ಇಲ್ಲ, ಯಾವುದೇ ನೋಟಿಸ್ ಕೊಡದೇ ಹೇಗೆ ಬಂಧನ ಮಾಡುತ್ತಿದ್ದೀರಿ. ರಿಮಾಂಡ್ ರಿಪೋರ್ಟ್​ ಕೂಡ ನೀಡಿಲ್ಲ. ಹೀಗಾಗಿ ಪ್ರಕರಣದ ಕುರಿತು ವಿವರಗಳನ್ನು ನೀಡಿ ಬಳಿಕ ಅರೆಸ್ಟ್ ಮಾಡಿ ಎಂದು ಎನ್​.ಚಂದ್ರಬಾಬು ನಾಯ್ಡು ಅಧಿಕಾರಿಗೆ ತಿಳಿಸಿದ್ದಾರೆ. ಆದರೆ ಇದನ್ನು ಯಾವುದೇ ಗಮನಕ್ಕೆ ತೆಗೆದುಕೊಳ್ಳದೇ ಪೊಲೀಸರು ಬಂಧಿಸಿದ್ದಾರೆ.

Share This Article
Leave a comment