ಇಂದು ರಾಜ್ಯ ಸಚಿವ ಸಂಪುಟ ರಚನೆ – ಸಧ್ಯಕ್ಕೆ ಐವರು ಶಾಸಕರಿಗೆ ಮಂತ್ರಿಗಿರಿ: ರಾಜಭವನದಲ್ಲಿ ಸಿದ್ಧತೆ

Team Newsnap
1 Min Read

ಬೊಮ್ಮಾಯಿ ಕ್ಯಾಬಿನೆಟ್​ ರಚನೆ ಕೊನೆಗೂ ಒಂದು ಹಂತಕ್ಕೆ ಬಂದಿದೆ. ಸಧ್ಯಕ್ಕೆ ಐವರು ಶಾಸಕರಿಗೆ ಮಾತ್ರ ದೂರವಾಣಿ ಮೂಲಕ ಮಾಹಿತಿ ಹೇಳಲಾಗಿದೆ. ಆ ಶಾಸಕರಿಗೆ ಮಂತ್ರಿ ಭಾಗ್ಯ ಸಿಕ್ಕಿದೆ. ಉಳಿದ 20 ಮಂದಿ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಗೌಪ್ಯವಾಗಿದೆ.

ಶಾಸಕ ಶಂಕರ್ ಪಾಟೀಲ್ ಮುನೇಕೊಪ್ಪ, ಈಶ್ವರಪ್ಪ, ಡಾ ಸುಧಾಕರ್ , ಬಿ ಸಿ ಪಾಟೀಲ್, ಮುರುಗೇಶ್ ನಿರಾಣಿ ಅವರುಗಳಿಗೆ ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಫೋನ್ ಮಾಡಿ ಪ್ರಮಾಣ ವಚನ‌ ಸ್ವೀಕಾರಕ್ಕೆ ಸಿದ್ದರಾಗಿ ಎಂದು ಹೇಳಿದ್ದಾರೆ.

ಸಚಿವರ ಪಟ್ಟಿಗೆ ಅಂಕಿತ ಪಡೆಯಲು ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್​ ನಾಯಕರ ಪ್ರದಕ್ಷಿಣೆ ಹಾಕುತ್ತಿದ್ದ ಬೊಮ್ಮಾಯಿ ಇಂದು ಬೆಳಗ್ಗೆ 9:00 ವೇಳೆಗೆ ಬೆಂಗಳೂರು ತಲುಪಲಿದ್ದಾರೆ. ಸದ್ಯ, ಮಂತ್ರಿಗಿರಿ ಪಟ್ಟಿಗೆ ಬಿಜೆಪಿ ಹೈಕಮಾಂಡ್​ ನಾಯಕರ ಮುದ್ರೆ ಬಿದ್ದಿದೆ ಎನ್ನಲಾಗಿದೆ.

ಮಧ್ಯಾಹ್ನ 2:15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ‌,
ಬಸವರಾಜ್ ಬೊಮ್ಮಾಯಿ ಸಿಎಂ ಆದ ಕ್ಷಣದಿಂದಲೇ ನಡೆಯುತ್ತಿದ್ದ ಕ್ಯಾಬಿನೆಟ್ ರಚನೆ ಸರ್ಕಸ್​ಗೆ ಕೊನೆಗೂ ಇವತ್ತು ಕ್ಲೈಮ್ಯಾಕ್ಸ್​ ನಿಗದಿಯಾಗಿದೆ.

Share This Article
Leave a comment