ಊಟದ ಬಿಲ್​ ಕೇಳಿದ್ದಕ್ಕೇ ಹಾಸನದ ಸಪ್ಲೈಯರ್​ಗೆ ಬೆಂಕಿ ಇಟ್ಟ ಪುಂಡರ ಗುಂಪು

Team Newsnap
1 Min Read

ಊಟ ಮಾಡಿದ ಬಿಲ್​ ಪಾವತಿಸಿ ಎಂದಿದ್ದಕ್ಕೆ ಪುಂಡರ ಗುಂಪೊಂದು ಡಾಬಾಗೆ ಬಂದು ಸಪ್ಲೈಯರ್ ಗೆ ಪೆಟ್ರೋಲ್​ ಸುರಿದು ಬೆಂಕಿಯಿಟ್ಟ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯ ಬ್ಯಾಲಕೆರೆ ಬಳಿಯಿರುವ ಯೂಟರ್ನ್ ಡಾಬಾದಲ್ಲಿ ಜರುಗಿದೆ.

ಈ ಡಾಬಾಗೆ ಊಟಕ್ಕೆ ಬಂದಿದ್ದ ಪುಂಡರು ಊಟ ಮುಗಿಸಿ ಹೊರಟಿದ್ದಾರೆ. ಈ ವೇಳೆ ಆಗಮಿಸಿದ ಸಪ್ಲೈಯರ್​ ಹಾಸನ ಮೂಲದ 19 ವಷ೯ದ ಯುವಕ ಊಟ ಮಾಡಿದ ಬಿಲ್​ ಪಾವತಿಸಲು ಕೇಳಿದ್ದಾನೆ.

ಕುಪಿತಗೊಂಡ ದುಷ್ಟರ ತಂಡ ಸಪ್ಲೈಯರ್​ಗೆ ಅವಾಜ್​ ಹಾಕಿ ಅಲ್ಲಿಂದ ತೆರಳಿದ್ದಾರೆ. ಆ ಬಳಿಕ ಮಧ್ಯರಾತ್ರಿ 12:30 ಕ್ಕೆ ಡಾಬಾ ಬಳಿ ವಾಪಸ್ ಬಂದಿದ್ದ ಆರೋಪಿಗಳು ಪೆಟ್ರೋಲ್ ತಂದು ಡಾಬಾ ಬಾಗಿಲಿಗೆ ಚಿಲಕ ಹಾಕಿ ಬೆಂಕಿ ಹಚ್ಚಿದ್ದಾರೆ.

ಈ ವೇಳೆ ಒಳಗಡೆ ಊಟ ಮಾಡುತ್ತಿದ್ದ ಡಾಬಾ ಸಿಬ್ಬಂದಿ ಮನೋಜ್​ ಬೆಂಕಿಯನ್ನು ಕಂಡು ಶಾರ್ಟ್​ ಸರ್ಕ್ಯೂಟ್ ಆಗಿದೆ ಎಂದು ಬಾಗಿಲ ಬಳಿಗೆ ಓಡಿ ಬಂದಿದ್ದಾರೆ.

ಈ ವೇಳೆ ಆರೋಪಿಗಳು ಎರಚುತ್ತಿದ್ದ ಪೆಟ್ರೋಲ್​ ಮನೋಜ್​ ಮೇಲೆ ಬಿದ್ದು ಆತನಿಗೂ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಉಳಿದ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಗಂಭೀರವಾಗಿ ಗಾಯಗೊಂಡಿರುವ ಮನೋಜ್​ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.

Share This Article
Leave a comment