ಆಹಾರ ಸುರಕ್ಷತಾ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

Team Newsnap
1 Min Read

ಕಲಬುರಗಿ : ಬುಧವಾರ ತಡರಾತ್ರಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಕಚೇರಿಯ ಇಬ್ಬರು ಆಹಾರ ಸುರಕ್ಷತಾ ಅಧಿಕಾರಿಗಳು ಲಂಚ ಪಡೆಯುತ್ತಿದ್ದು , ಲೋಕಾಯುಕ್ತರ ಬಲೆಗೆ‌ ಬಿದ್ದಿದ್ದಾರೆ.

ನೀರು ಶುದ್ಧೀಕರಣ ಘಟಕದ ನವೀಕರಣ ಮಾಡಿಕೊಡಲು ಮಹಮದ್ ಮುಕ್ತಿದೀರ್ ಎಂಬುವರಿಂದ ₹40 ಸಾವಿರ ಲಂಚ ಪಡೆಯುವಾಗ ಆಹಾರ ಸುರಕ್ಷತಾ ಅಧಿಕಾರಿ‌ಗಳಾದ ಪರಮೇಶ್ವರ ಮಠಪತಿ ಹಾಗೂ ಕಿರಣ್ ಚಲವಾದಿ ಸಿಕ್ಕಿ ಬಿದ್ದಿದ್ದಾರೆ‌ .

ಇದನ್ನು ಓದಿ –IPL2024 : ಭಾರತದಲ್ಲೇ ನಡೆಯಲಿದೆ ಈ ಬಾರಿಯ IPL

ತಡರಾತ್ರಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ದೃವತಾರೆ ಅವರ ತಂಡ ₹40 ಸಾವಿರ ಲಂಚ ಪಡೆಯುವಾಗ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Share This Article
Leave a comment