ಮಂಡ್ಯದ ಮೇಲುಕೋಟೆ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ ನಂತರ ಗೂಡ್ಸ್ ಟೆಂಪೋಗೆ ಆಕಸ್ಮಿಕವಾಗಿ ಬೆಂಕಿ ತಗುಲು ವಾಹನ ಬೆಂಕಿಗೆ ಆಹುತಿಯಾಗಿದೆ.
ಮಂಡ್ಯ ಗುತ್ತಲು ನಿವಾಸಿ ಸಿ ಸುರೇಶ್ ಎಂಬುವವರಿಗೆ ಸೇರಿದ ಈ ಗೂಡ್ಸ್ ಟೆಂಪೋ ಗೆ ನಗರದ ಹೊರ ವಲಯದಲ್ಲಿರುವ ಸಿಮೆಂಟ್ ಗೋಡೌನ್ ಬಳಿ ಈ ಘಟನೆ ಸಂಭವಿಸಿದೆ.
ಈ ದುರಂತದಲ್ಲಿ ಯಾರಿಗೂ ಪ್ರಾಣಾಪಾಯವಿಲ್ಲ. ಅಗ್ನಿ ಅವಘಡದಿಂದಾಗಿ ಟೆಂಪೋ ಸುಟ್ಟು ಹೋಗಿದೆ. ಅಂದಾಜು 10 ಲಕ್ಷ ರು ನಷ್ಟವಾಗಿದೆ ಎಂದು ಟೆಂಪೋ ಮಾಲೀಕ ಸುರೇಶ್ ತಿಳಿಸಿದ್ದಾರೆ.
ಇದನ್ನು ಓದಿ – ಸಿಕಂದರಾಬಾದ್ ಹಿಂಸಾಚಾರ: ಮಾಜಿ ಸೈನಿಕನ ಕೈವಾಡ- ಮಾಸ್ಟರ್ ಮೈಂಡ್ ಬಂಧನ
ಘಟನೆ ಸಂಭವಿಸಿದ ಕೂಡಲೇ ಸ್ಥಳೀಯರಿಂದ ಮಾಹಿತಿ ಪಡೆದ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ನಷ್ಠ ತಪ್ಪಿಸಿದರು ಪಶ್ಚಿಮ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.