ರೈತರೇ ಪರ್ಯಾಯ ಕೃಷಿಯತ್ತಲೂ ಯೋಚಿಸಿ: ಶೋಭಾ

Team Newsnap
0 Min Read
No sunflower, no peanut in sunflower and peanut oil: Shobha Karandlaje

ಪ್ರಮುಖ ಬೆಳೆ ಜತೆಗೆ ಪರ್ಯಾಯ ಕೃಷಿಯತ್ತಲೂ ರೈತರು ಗಮನ ನೀಡಬೇಕೆಂದು ಕೇಂದ್ರದ ಕೃಷಿ ಖಾತೆ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಆತ್ಮಹತ್ಯೆ ಯೋಚನೆಯನ್ನು ರೈತರು ಬಿಡಬೇಕು.

ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸಚಿವರು ಕಲಬುರ್ಗಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.


ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಶೋಭಾ ಪ್ರತಿಕ್ರಿಯಿಸಿ, ಹೋರಾಟ ಮಾಡುತ್ತಿರುವ ಮುಖಂಡರೊಂದಿಗೆ ಕೇಂದ್ರ ಸರ್ಕಾರ ಈಗಾಗಲೇ 11 ಸುತ್ತು ಚರ್ಚೆ ನಡೆಸಿದೆ. ಕೃಷಿ ಕಾಯ್ದೆ ಯಾವ ಉದ್ದೇಶಕ್ಕೆ ಮಾಡಲಾಗಿದೆ ಎಂಬುದನ್ನು ಹೋರಾಟ ನಡೆಸುತ್ತಿರುವವರು ಅರಿತುಕೊಳ್ಳಬೇಕು. ಈಗಲೂ ಚರ್ಚೆಗೆ ಸರ್ಕಾರ ಸಿದ್ಧ ಎಂದು ಪುನರುಚ್ಚರಿಸಿದರು.

Share This Article
Leave a comment