ಮದುವೆಯಾಗಲು ಕನ್ಯೆ ಸಿಗದ ಕಾರಣ ಮರಕ್ಕೆ ನೇಣು ಬಿಗಿದುಕೊಂಡು ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ಜರುಗಿದೆ
ಇದನ್ನು ಓದಿ –ಮೂಡಿಗೆರೆ – ಗುಬ್ಬಿ ಬಳಿಎರಡು ಪ್ರತ್ಯೇಕ ರಸ್ತೆ ಅಪಘಾತ : ನಾಲ್ವರು ಸಾವು
ಯಲ್ಲಾಪುರದ ಕರಗುಪ್ಪಿ ಬಾಳಪ್ಪ ಪಾಟೀಲ್ ಅವರಿಗೆ ಮೂರು ಜನ ಮಕ್ಕಳು, ಮದುವೆ ವಯಸ್ಸಿಗೆ ಬಂದ ಕಾರಣ ಹೆಣ್ಣು ನೋಡಲು ತಂದೆ ತಾಯಿ ಶುರುಮಾಡಿದ್ದರು.
ಹೋದ ಕಡೆಯಲ್ಲೆ ಸರ್ಕಾರಿ ನೌಕರಿ, ಶಾಲೆ ಕಲಿತು ಉದ್ಯೋಗದಲ್ಲಿದ್ರೆ ಮಾತ್ರ ಹೆಣ್ಣು ಕೊಡುತ್ತೇವೆ ಅಂತ ಹೇಳಿದ್ದರಂತೆ.
ಬಾಳಪ್ಪ ಪಾಟೀಲ್ ಕೊನೆ ಮಗ 25 ವರ್ಷದ ರಮೇಶ್ ಪಾಟೀಲ್ ತನ್ನ ಅಣ್ಣಂದಿರಿಗೂ ಹಲವು ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದರು. ಯಾರು ಹೆಣ್ಣು ಕೊಡದ ಪರಿಣಾಮ ಬೇಸತ್ತಿರುವ ರಮೇಶ್ ಮದುವೆ ಆಗಲಿಲ್ಲ ಅಂತ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದಲೇ ತಮ್ಮ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಗನನ್ನು ಕಳೆದುಕೊಂಡ ತಂದೆ-ತಾಯಿ ದುಃಖಿತರಾಗಿದ್ದಾರೆ.
- 2.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ‘CWMA’ ಸೂಚನೆ
- 5 ವರ್ಷದ ಬಾಲಕ ಸಂಪ್ ಗೆ ಬಿದ್ದು ಸಾವು
- ಜ್ಞಾನಬುತ್ತಿ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಯುವ ಉಚಿತ ತರಬೇತಿ ಶಿಬಿರದ ಉದ್ಘಾಟನೆ
- ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ : ಬಾಲಕಿಯರೇ ಮೇಲುಗೈ
- ಮೈಸೂರಿನಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವು : 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ
- ಬೆಂಗಳೂರಿನಲ್ಲಿ ರೇವ್ ಪಾರ್ಟಿ : ನಟಿ ಹೇಮಾ, ನಟ ಶ್ರೀಕಾಂತ್ ಬಂಧನ