ಪತ್ನಿಯ ಕಾಲು ಕತ್ತರಿಸಿದ್ದೇನೆ, ನಾಲ್ವರು ಹುಡುಗರನ್ನು ಕಳಿಸಿ: ಹೊಟೇಲ್ ಮಾಲೀಕರಿಗೆ ಪತಿ ಕರೆ

Team Newsnap
1 Min Read

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಕಾಲನ್ನು ಪತಿ ಕತ್ತರಿಸಿದ ಘಟನೆ ತುಮಕೂರಿನ ಅಶೋಕ ಹೋಟೆಲ್‍ನಲ್ಲಿ ಇಂದು ಜರುಗಿದೆ .

ಗದಗ ಮೂಲದ ಬಾಬು (34) ಎಂಬಾತ ಆರೋಪಿ. ಗಾಯಗೊಂಡ ಅನಿತಾಳನ್ನು ನಾಲ್ಕು ವರ್ಷದ ಹಿಂದೆ ಬಾಬು ಮಧುಗಿರಿ ಮೂಲದ ಮದುವೆಯಾಗಿದ್ದ.

ಆದರೆ ದಂಪತಿ ನಡುವೆ ಪದೇ ಪದೇ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು.
ಇಂದು ಬೆಳಗ್ಗೆ 6 ಗಂಟೆ ವೇಳೆ ದಂಪತಿ ಅಶೋಕ ಲಾಡ್ಜ್‌ಗೆ ಬಂದಿದ್ದರು. ಈ ವೇಳೆ ಅನಿತಾಳ ಕಾಲು ಕತ್ತರಿಸಿ, ತಾನೇ ಹೊಟ್ಟೆಗೆ ಚೂರಿ ಹಾಕಿಕೊಂಡಿದ್ದಾನೆ. ನಂತರ ಹೋಟೆಲ್ ಮಾಲೀಕರಿಗೆ ಕರೆ ಮಾಡಿ, ನಾಲ್ವರು ಹುಡುಗರನ್ನು ಕಳುಹಿಸಿ, ಹೆಂಡತಿಯ ಕಾಲು ಕತ್ತರಿಸಿದ್ದೇನೆ ಆಸ್ಪತ್ರೆಗೆ ಸೇರಿಸಬೇಕು ಎಂದು ತಿಳಿಸಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಗಾಯಗೊಂಡ ಅನಿತಾ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಾಬುವನ್ನು ತುಮಕೂರು ನಗರ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment