ಜೊತೆ ಜೊತೆಯಲಿ ಧಾರವಾಹಿಯಿಂದ ಅನಿರುದ್ದ ಬಹಿಷ್ಕಾರ – ಸಂಘದ ನಿರ್ಧಾರ

Team Newsnap
1 Min Read
Gatepass for the hero of 'Jothe jothe yaali': Anirudh revealed pain 'ಜೊತೆ ಜೊತೆಯಲಿ ' ನಾಯಕನಿಗೆ ಗೇಟ್​ಪಾಸ್​: ಮನದ ನೋವು ಬಹಿರಂಗ ಮಾಡಿದ ಅನಿರುದ್ಧ್​

ಜೊತೆ ಜೊತೆಯಲಿ ಸೀರಿಯಲ್​ನ ನಟ ಅನಿರುದ್ಧ್​ ಹಾಗೂ ನಿರ್ಮಾಪಕರ ಮಧ್ಯೆ ಮನಸ್ತಾಪ ತಾರಕಕ್ಕೇರಿದೆ.

ಕಿರುತೆರೆಯಿಂದ ಅನಿರುದ್ಧ್ ಅವರನ್ನು ಎರಡೂ ವರ್ಷ ಬಹಿಷ್ಕಾರಿಸಲು ಕಿರುತೆರೆ ನಿರ್ಮಾಪಕರ ಸಂಘ ನಿರ್ಧಾರ ಮಾಡಿದೆ.

ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಮಾಹಿತಿ ನೀಡಿ ಅನಿರುದ್ಧ್ ಅವರನ್ನು ಬ್ಯಾನ್ ಮಾಡಿಲ್ಲ. ಆದರೆ ಅವರನ್ನು ಎರಡು ವರ್ಷ ಕಿರುತೆರೆಯಿಂದ ದೂರ ಇಡುತ್ತಿದ್ದೇವೆ.

ಏಕೆಂದರೆ ಅನಿರುದ್ಧ್ ಅವರು ಜೊತೆ ಜೊತೆಯಲಿ ಸೀರಿಯಲ್​​ನ ನಿರ್ದೇಶಕ ಮಧು ಉತ್ತಮ್ ಅವರಿಗೆ ಮೂರ್ಖ ಅಂತ ಕರೆದಿದ್ದಾರೆ. ಸ್ಕ್ರಿಪ್ಟ್ ವಿಚಾರಕ್ಕೆ ನಿರ್ದೇಶಕರಿಗೆ ನಿಂದಿಸಿ ಶೂಟಿಂಗ್ ಸೆಟ್ ನಿಂದ ಹೊರ ಹೋಗಿದ್ದಾರೆ ಎಂದರು.

ಧಾರಾವಾಹಿ ದೃಶ್ಯ ಬದಲಾವಣೆ ಮಾಡುವಂತೆ ನಿರ್ದೇಶಕ ಮಧು ಉತ್ತಮ್ ಜೊತೆ ಅನಿರುದ್ಧ್ ಕಿರಿಕ್ ಮಾಡಿದ್ದಾರೆ.

ಜಗದೀಶ್​ ಅವರಿಗೆ ಆಗಿರುವ ಅನುಭವ ನಮಗೆ ಆಗಬಾರದು ಅಂತ ನಾವು ಈ ನಿರ್ಧಾರ ಮಾಡಿದ್ದೇವೆ ಅಷ್ಟೇ. ಹಲವು ಭಾರೀ ಜಗಳ ಆಡಿ ಶೂಟಿಂಗ್ ಸೆಟ್​​ನಿಂದ ಅನಿರುದ್ಧ್ ಹೊರ ನಡೆಸಿದ್ದಾರೆ. ಕಳೆದ ಎರಡು ದಿನದ ಹಿಂದೆ ಕೂಡ ಧಾರಾವಾಹಿ ತಂಡದ‌ ಜೊತೆ ಜಗಳ ಮಾಡಿಕೊಂಡು ಶೂಟಿಂಗ್ ಮಾಡದೇ ಹೊರ ನಡೆದಿದ್ದರು. ಇದನ್ನು ಸಹಿಸಿ ಸಹಿಸಿ ಸಾಕಾಗಿದೆ.

ಹಲವು‌ ಭಾರೀ ಈ ಘಟನೆ ಆಗಿದೆ ಅಂತ ಈ ನಿರ್ಧಾರ ಮಾಡಿದ್ದೇವೆ. ಪದೇ ‌ಪದೇ ಹೀಗೆ ಆಗೋದನ್ನು ಸಹಿಸದೇ ಜೊತೆ ಜೊತೆಯಲಿ ತಂಡ ಧಾರವಾಹಿಯಿಂದ ಕೈ ಬಿಡಲು ನಿರ್ಧರಿಸಿದೆ ಎಂದು ಹೇಳಿದರು

Share This Article
Leave a comment