January 30, 2026

Newsnap Kannada

The World at your finger tips!

kalappa

ವಿಶಿಷ್ಟ ರೀತಿಯಲ್ಲಿ ಪರಿಸರ ದಿನಾಚರಣೆ ಆಚರಿಸಿದ‌ ಪರಿಸರ ಜಾಗೃತಿ ವೇದಿಕೆ

Spread the love

ಮನೆಯ ಅಂಗಳ, ಖಾಲಿ ಜಾಗ, ಹಾಗೂ ಬೆಟ್ಟಗುಡ್ಡ ಪ್ರದೇಶದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕು ಎಂದು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ತಿಳಿಸಿದರು.

ಪಟ್ಟಣದ ಸಮೀಪ ಹನುಮನಾಳು ಗ್ರಾಮದಲ್ಲಿ ಪರಿಸರ ಜಾಗೃತಿ ವೇದಿಕೆಯಿಂದ ಪರಿಸರ ದಿನಾಚರಣೆ ಅಂಗವಾಗಿ ಶನಿವಾರ ಸಸಿ ನೆಟ್ಟು ಮಾತಾನಾಡಿದ ಅವರು ನಾವು ಉಸಿರಾಡುವಂತ ಗಾಳಿಗೆ ಹಣ ನೀಡಿ ಪಡೆಯುವಂತ ಪರಿಸ್ಥಿತಿಗೆ ಇಂದು ನಾವು ತಲುಪಿದ್ದೇವೆ,

ಈಗಲೇ ನಾವೆಲ್ಲಾ ಎಚ್ಚೆತ್ತುಕೊಂಡು ಪರಿಸರ ಸಮತೋಲನ ಕಾಪಾಡಿಕೊಳ್ಳಬೇಕು ಎಂದರು.
ಈ ವೇಳೆ ರಾಜು, ತಿಮ್ಮಮ್ಮ, ನಾಗಮ್ಮ, ವೆಂಕಟೇಶ್, ಭಾಗ್ಯ,ದೇವಮ್ಮ,ಸಿದ್ದಮ್ಮ,ಮಣಿ ಇತರರಿದ್ದರು.

error: Content is protected !!