January 28, 2026

Newsnap Kannada

The World at your finger tips!

rajna

ಅಂತ್ಯವಾಗದ ಭಾರತ-ಚೀನಾ ಗಡಿ ಸಂಘರ್ಷ-ರಕ್ಷಣಾ ಸಚಿವ ರಾಜನಾಥ್‌

Spread the love

ಭಾರತ – ಚೀನಾದ ಗಡಿ ಸಂಘರ್ಷ ಇನ್ನೂ ಮುಗಿದಿಲ್ಲ. ಬದಲಾಗಿ‌ ಸಂಘರ್ಷ ಗಂಭಿರ ರೂಪ ಪಡೆದುಕೊಳ್ಳುತ್ತಿದೆ. ಹಾಗಾಗಿ ನಮಗೆ ಶಾಂತಯುತ ಪರಿಹಾರ ಬೇಕಿದೆ’ ಎಂದು ಸಂಸತ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಕರೋನಾ ಪರಿಸ್ಥಿತಿಯಲ್ಲಿ ಚೀನಾ ಸುಮ್ಮನೆ ತಗಾದೆ ತೆಗೆಯುತ್ತಿದೆ. ಎಲ್ಎಸಿಯಲ್ಲಿ ಮೂಲಸೌಕರ್ಯ ಕಲ್ಪಿಸುತ್ತಿದೆ. ಆದರೆ ಎಲ್ಎಸಿಯನ್ನು ಎರಡೂ ದೇಶಗಳು ಗೌರವಿಸಬೇಕು. ಚೀನಾ ಏಪ್ರಿಲ್ ನಿಂದಲೇ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹಣೆಯನ್ನು ಮಾಡುತ್ತಿದೆ. ಈ ನಡೆಯನ್ನು ತಕ್ಷಣ ಚೀನಾ ಬಿಡಬೇಕು. ಗಡಿ ಸಮಸ್ಯೆಗೆ ನಮಗೆ ಶಾಂತಿಯುತ ಪರಿಹಾರ ಬೇಕು’ ಎಂದು ಅವರು ಹೇಳಿದರು.

ಗಡಿ‌ ಸಮಸ್ಯೆಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮೋದಿಯವರು ಲಡಾಖ್ ಗೆ ಭೇಟಿ ನೀಡಿ‌ ಸೈನಿಕರನ್ನು ಉತ್ತೇಜಿಸಿ ಭಾಷಣ ಮಾಡಿದ್ದರು.

error: Content is protected !!