ಭಾರತ – ಚೀನಾದ ಗಡಿ ಸಂಘರ್ಷ ಇನ್ನೂ ಮುಗಿದಿಲ್ಲ. ಬದಲಾಗಿ ಸಂಘರ್ಷ ಗಂಭಿರ ರೂಪ ಪಡೆದುಕೊಳ್ಳುತ್ತಿದೆ. ಹಾಗಾಗಿ ನಮಗೆ ಶಾಂತಯುತ ಪರಿಹಾರ ಬೇಕಿದೆ’ ಎಂದು ಸಂಸತ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಕರೋನಾ ಪರಿಸ್ಥಿತಿಯಲ್ಲಿ ಚೀನಾ ಸುಮ್ಮನೆ ತಗಾದೆ ತೆಗೆಯುತ್ತಿದೆ. ಎಲ್ಎಸಿಯಲ್ಲಿ ಮೂಲಸೌಕರ್ಯ ಕಲ್ಪಿಸುತ್ತಿದೆ. ಆದರೆ ಎಲ್ಎಸಿಯನ್ನು ಎರಡೂ ದೇಶಗಳು ಗೌರವಿಸಬೇಕು. ಚೀನಾ ಏಪ್ರಿಲ್ ನಿಂದಲೇ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹಣೆಯನ್ನು ಮಾಡುತ್ತಿದೆ. ಈ ನಡೆಯನ್ನು ತಕ್ಷಣ ಚೀನಾ ಬಿಡಬೇಕು. ಗಡಿ ಸಮಸ್ಯೆಗೆ ನಮಗೆ ಶಾಂತಿಯುತ ಪರಿಹಾರ ಬೇಕು’ ಎಂದು ಅವರು ಹೇಳಿದರು.
ಗಡಿ ಸಮಸ್ಯೆಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮೋದಿಯವರು ಲಡಾಖ್ ಗೆ ಭೇಟಿ ನೀಡಿ ಸೈನಿಕರನ್ನು ಉತ್ತೇಜಿಸಿ ಭಾಷಣ ಮಾಡಿದ್ದರು.


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ