ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡಿ: ಸಾ.ರಾ. ಮಹೇಶ್

Team Newsnap
0 Min Read

ಮೈಸೂರಿನಲ್ಲಿ ಇತ್ತೀಚಿಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು ಎಂದು ಕೆ.ಆರ್.ನಗರ ಶಾಸಕ ಸಾ.ರ. ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.


ಮೈಸೂರಿನಲ್ಲಿ ವರದಿಗಾರರೊಂದಿಗೆ ಅವರು ಮಾತನಾಡಿ, ಗ್ಯಾಂಗ್‌ರೇಪ್ ವಿಚಾರ ಇಡೀ ಮೈಸೂರೇ ತಲೆತಗ್ಗಿಸುವಂತದ್ದಾಗಿದೆ. ಇಂದು ಪೊಲೀಸರು ಬಂಧಿಸಿದ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು, ಎನ್‌ಕೌಂಟರ್ ಮಾಡಬೇಕೆಂಬ ಆಕ್ರೋಶದ ಕೂಗು ಕೇಳಿ ಬರುತ್ತಿದೆ. ರಾಜ್ಯದ ನಾನಾ ಕಡೆ ನಡೆದ ಪ್ರತಿಭಟನೆ ಸಮಯದಲ್ಲೂ ಇಂತಹ ಆಗ್ರಹಗಳು ಬಂದವು.

Share This Article
Leave a comment