ಮುತ್ತಗೆರೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿ : ವಾಹನ ಸಂಪೂರ್ಣ ಭಸ್ಮ | ವೀಡಿಯೊ ಇಲ್ಲಿದೆ

Team Newsnap
1 Min Read

ಮಂಡ್ಯ : ವಿದ್ಯುತ್ ಚಾಲಿತ ಸ್ಕೂಟರ್ ಗೆ ಆಕಸ್ಮಿಕ ಬೆಂಕಿ ತಗುಲಿ ಭಸ್ಮ ವಾದ ಘಟನೆ ಭಾನುವಾರ ಮಧ್ಯಾಹ್ನ ಬಸರಾಳು ಹೋಬಳಿ ಮುತ್ತೇಗೆರೆ ಗ್ರಾಮದಲ್ಲಿ ಜರುಗಿದೆ

ಒಕಿನೋವಾ ಕಂಪನಿಯ ಸ್ಕೂಟರ್ರ್ ನ ಕಿ ಆನ್ ಮಾಡಿ ಸ್ಟಾರ್ಟ್ ಮಾಡುತ್ತಿದ್ದಂತೆ ಧಗ್ಗನೆ ಬೈಕ್ ಹತ್ತಿ ಉರಿದು ಕರಕಲಾಗಿದೆ. ಮುತ್ತೆಗೆರೆ ಗ್ರಾಮದ ಚಂದ್ರಶೇಖರ್ ಎನ್ನುವ ಯುವಕ ಬಸರಾಳಿಗೆ ಹೋಗಲು ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಈ ಘಟನೆ ನಡೆದಿದೆ.

ಈ ಘಟನೆಯಿಂದ ಬೆಚ್ಚಿದ ಗ್ರಾಮಸ್ಥರು ಹಾಗೂ ಯುವಕ ಗಾಬರಿಗೆ ಒಳಗಾಗಿದ್ದಾರೆ ಬೈಕ್ ತಗುಲಿದ ಬೆಂಕಿ ಆರಿಸಲು ಗ್ರಾಮಸ್ಥರು ಪ್ರಯತ್ನಿಸುವ ಮುಂಚೆ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್

Share This Article
Leave a comment