ಮಂಡ್ಯ- ಮೈಸೂರು – ಆರ್ ಆರ್ ನಗರದಲ್ಲಿ ಭಾರಿ ಭೂಮಿ ಕಂಪನ – ದೇಶದ ಈಶಾನ್ಯ ಭಾಗದಲ್ಲೂ ಭೂಕಂಪ

Team Newsnap
1 Min Read

ಹಳೇ ಮೈಸೂರು ಭಾಗದಲ್ಲಿ ಮಧ್ಯಾಹ್ನ ಭಾರಿ ಭೂಮಿ ಕಂಪಿಸಿದೆ

ಮಂಡ್ಯ- ಮೈಸೂರು – ಆರ್ ಆರ್ ನಗರದಲ್ಲಿ ಭಾರಿ ಭೂಮಿ ಕಂಪಿಸಿ ಕ್ಷಣ ಕಾಲ ಜನರಲ್ಲಿ ಭೀತಿ ಉಂಟು ಮಾಡಿತು.
ಈ ಭೂಮಿ ಕಂಪನದಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ ಆದರೆ ಕಟ್ಟಡಗಳು ನಡುಗಿದಂತೆ ಭಾಸವಾಯಿತು.

ಭೂಮಿ ಕಂಪಿಸಿದ್ದು ಯಾವ ದಿಕ್ಕಿನಲ್ಲಿ ಎಂದು ಹೇಳುವುದೇ ಕಷ್ಟವಾಗಿತ್ತು.

ಈ ನಡುವೆ ಇಂದು ಬೆಳಿಗ್ಗೆ
ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.

ಭಾರತದ ಈಶಾನ್ಯ ಭಾಗಗಳಾದ ತ್ರಿಪುರಾ, ಮಣಿಪುರ, ಮಿಜೊರಾಂ, ಅಸ್ಸಾಂಮ್ ಸೇರಿದಂತೆ ಕೋಲ್ಕತ್ತಾದ ವರೆಗೂ ಭೂಕಂಪನದ ಅನುಭವವಾಗಿದೆ.
ಸಾವು ನೋವಿನ ವರದಿಗಳು ಬಂದಿಲ್ಲ.

Share This Article
Leave a comment