ವಿಧಾನಸಭೆಗೆ ಅವಧಿಪೂರ್ವ ಚುನಾವಣೆ: ಸುದರ್ಶನ್ ಭವಿಷ್ಯ

Team Newsnap
1 Min Read

ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ಗಮನಿಸಿದರೆ ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ಬರುವ ಸಂಭವ ಇದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಹ ಅಧ್ಯಕ್ಷ ವಿ.ಆರ್ ಸುದರ್ಶನ್ ಭವಿಷ್ಯ ನುಡಿದಿದ್ದಾರೆ.


ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಬೇಕಾದ ಸಿದ್ಧತೆ ನಡೆಸುತ್ತಿದೆ ಎಂದು ಅವರು ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನವದೆಹಲಿಯಲ್ಲಿನ ರೈತರ ಪ್ರತಿಭಟನೆ ಕಾಂಗ್ರೆಸ್ ಪ್ರಯೋಜಿತ ಎಂಬ ಹೇಳಿಕೆಯನ್ನು ಸಂವೇದನಾಶೀಲ ಮುಖ್ಯಮಂತ್ರಿ ಎನಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರಿಂದ ನಿರೀಕ್ಷಿಸಿರಲಿಲ್ಲ ಎಂದರು.


ರೈತರ ಕುರಿತು ಹಗುರವಾಗಿ ಮಾತನಾಡುವುದು ತರವಲ್ಲ. ಇವರು ರೈತರ ಪರ ಹೋರಾಟ ಮಾಡೇ ಇಲ್ಲವೇ ಎಂದು ಸುದರ್ಶನ್ ಪ್ರಶ್ನೆ ಮಾಡಿದರು.


ರೈತರ ಪರ ಹೋರಾಟಗಾರರು ಎನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶೀರ್ವಾದದಿಂದ ಮುಖ್ಯಮಂತ್ರಿಯಾದ ಬೊಮ್ಮಾಯಿ ರೈತರ ಹೋರಾಟದ ಬಗ್ಗೆ ನೀಡಿದ ಹೇಳಿಕೆ ಅವರಿಗೆ ಗೌರವ ತರುವಂತಹದ್ದು ಅಲ್ಲ ಎಂದು ಜರಿದರು.

Share This Article
Leave a comment