ಡಿವೈಎಸ್ಪಿ ಲಕ್ಷ್ಮೀ ಮೊಬೈಲ್ ಸಿಗ್ತಾನೇ ಇಲ್ಲ ಎಲ್ಲಿ ಹೋಯಿತು? ಪೋಲಿಸರ ಪೀಕಲಾಟ – ಮೊಬೈಲ್ ನಲ್ಲೇ ಸತ್ಯ !

Team Newsnap
1 Min Read

ಡಿವೈಎಸ್‍ಪಿ ಲಕ್ಷ್ಮಿ ಅನುಮಾಸ್ಪದ ಸಾವಿನ ಸತ್ಯ ಅವರ ಮೊಬೈಲ್ ನಲ್ಲೇ ಅಡಗಿದೆ. ಆದರೆ ಮೊಬೈಲ್ ಮಾತ್ರ ನಿಗೂಢ ವಾಗಿ ನಾಪತ್ತೆಯಾಗಿರುವುದು ಪೋಲಿಸರಿಗೆ ತಲೆ ಬಿಸಿಯಾಗಿದೆ.

ಲಕ್ಷ್ಮೀ ಮೊಬೈಲ್ ಸಿಗದ ಹಿನ್ನೆಲೆ ಪೊಲೀಸರಿಗೆ ತಾಂತ್ರಿಕ ಹಿನ್ನಡೆ ಆಗಿದೆ. ಒಂದು ವೇಳೆ ಮೊಬೈಲ್ ಪತ್ತೆಯಾದರೆ ತನಿಖೆಗೆ ಮಹತ್ವದ ಸುಳಿವು ಸಿಕ್ಕರೆ ತನಿಖೆ ದಿಕ್ಕೇ ಬದಲಾಗುವ ಸಾಧ್ಯತೆಗಳಿವೆ.

ಡಿವೈಎಸ್‍ಪಿ ಲಕ್ಷ್ಮಿ ಅವರ ಒಳ ಮತ್ತು ಹೊರ ಹೋಗಿರುವ ಫೋನ್ ಕರೆಗಳು, ವಾಟ್ಸಪ್ ಚಾಟಿಂಗ್ ಸೇರಿ ಹಲವು ಮಾಹಿತಿಗಳು ಬೇಕಾಗಿದೆ.

ಲ ಸಾವಿಗೂ ಮುನ್ನ ಯಾರ ಜೊತೆ ಎಷ್ಟು ಸಮಯ ಮಾತನಾಡಿದ್ದಾರೆ. ಯಾವ ಸಮಯದಲ್ಲಿ ಎಲ್ಲಿದ್ದರು ಇತ್ಯಾದಿ ವಿಷಯಗಳು ಗೊತ್ತಾಗುತ್ತದೆ.

ಡಿಸೆಂಬರ್ 16ರಂದು ಸಿಐಡಿ ಡಿವೈಎಸ್‍ಪಿ ಲಕ್ಷ್ಮಿ ಬಿಬಿಎಂಪಿ ಗುತ್ತಿಗೆದಾರ ಮನೋಹರ್ ಮನೆಯಲ್ಲಿ ರಾತ್ರಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದರು, ಮನೋಹರ್ ಮನೆಯಲ್ಲೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡವರು ಇದು ಆತ್ಮಹತ್ಯೆ ಎನ್ನುತ್ತಿದ್ರೆ, ಕುಟುಂಬಸ್ಥರು ಮಾತ್ರ ಕೊಲೆ ಎಂದು ಆರೋಪಿಸುತ್ತಿ ದ್ದಾರೆ. ಲಕ್ಷ್ಮಿ ಅವರದ್ದು ಕೊಲೆಯೋ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ನಾಲ್ವರನ್ನು ತನಿಖೆ ನಡೆಸುತ್ತಿದ್ದಾರೆ. ಆದರೆ ಯಾವುದೇ ಸತ್ಯ ಇದುವರೆಗೂ ಹೊರ ಬಂದಿಲ್ಲ.

Share This Article
Leave a comment