ನವಂಬರ್ 1ರಂದು ಮನೆ ಮನೆಗೆ ಕನ್ನಡ ಬಾವುಟ : ಜೆಡಿಎಸ್ ನಿಂದ ಅಭಿಯಾನ

Team Newsnap
1 Min Read

ರಾಜ್ಯದ ಮುಂದಿನ ವಿಧಾನಸಭೆ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ. ನವೆಂಬರ್ 1 ರಿಂದ ಮನೆ ಮನೆಗೆ ಕನ್ನಡ ಬಾವುಟ ಅಭಿಯಾನ ನಡೆಸಲು ಜೆಡಿಎಸ್ ಸಿದ್ಧತೆ ನಡೆಸಿದೆ.

ರಾಜ್ಯಾದ್ಯಂತ ನವೆಂಬರ್​ 1ರಿಂದ ಮನೆ ಮನೆಗೆ ಕನ್ನಡ ಬಾವುಟ ಎಂಬ ಅಭಿಯಾನ ಮಾಡಲು ಜೆಡಿಎಸ್ ಮುಂದಾಗಿದೆ. ಹೆಚ್​.ಡಿ.ಕುಮಾರಸ್ವಾಮಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನವೆಂಬರ್ 1ರಿಂದ 15 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ ಜನರಿಗೆ ಬಾವುಟ ನೀಡಲು ಹೆಚ್​ಡಿಕೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.ನ್ಯಾ. ಪ್ರಸನ್ನ ಬಾಲಚಂದ್ರ ವರಳೆ ಹೈಕೋರ್ಟ್ ನ C J ಆಗಿ ಪ್ರಮಾಣವಚನ ಸ್ವೀಕಾರ

ಈಕುರಿತು ಮಾಹಿತಿ ನೀಡಿರುವ ಹೆಚ್. ಡಿ.ಕುಮಾರಸ್ವಾಮಿ, ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ನವೆಂಬರ್ 1ರಂದು ಮನೆ ಮನೆಗೆ ಕನ್ನಡ ಬಾವುಟ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Share This Article
Leave a comment