February 21, 2026

Newsnap Kannada

The World at your finger tips!

yediyurappa 1

ಸಿಎಂ ಸ್ಥಾನ ಬದಲಾವಣೆ : ತಾವು (ಪತ್ರಕರ್ತರು) – ಸಿದ್ದರಾಮಯ್ಯ ಕುಳಿತು ದಿನಾಂಕ ನಿಗದಿ ಮಾಡಿ – ಯಡಿಯೂರಪ್ಪ ವ್ಯಂಗ್ಯ

Spread the love

ನಾನು ಯಾವಾಗ ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಯಬೇಕು ಎನ್ನುವುದನ್ನು ನೀವು ( ಪತ್ರಕರ್ತರು) ಹಾಗೂ
ಸಿದ್ದರಾಮಯ್ಯನವರು‌ ಸೇರಿ‌ ಕುಳಿತು ದಿನಾಂಕ ನಿಗಧಿ ಮಾಡಿ ಎಂದು ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಸುತ್ತೂರಿನಲ್ಲಿ ವ್ಯಂಗ್ಯವಾಗಿ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಸುತ್ತೂರಿಗೆ ಆಗಮಿಸಿದ್ದ‌ ಸಿಎಂ ಯಡಿಯೂರಪ್ಪ ಸಿಎಂ ಸ್ಥಾನ ಬದಲಾವಣೆ ಆಗುತ್ತದೆ ಎಂಬ ಹೇಳಿಕೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ಸಿಎಂ ಬದಲಾವಣೆಗೆ ಬಗ್ಗೆ ನೀವು (ಸಿದ್ದರಾಮಯ್ಯ ) ಅವರನ್ನೇ ಕೇಳಿ ಎಂದರು.

ಎರಡು – ಮೂರು ದಿನಗಳಲ್ಲಿ ಗೊತ್ತಾಗುತ್ತದೆ :

ಜನವರಿ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತವಾಗಿದೆ. ಅಂದು ಪುನರ್ ರಚನೆಯೋ ಅಥವಾ ವಿಸ್ತರಣೆ ಮಾಡಲಾಗುವುದು ಎಂಬುದು ಎರಡು – ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.

13ರ ಮಧ್ಯಾಹ್ನ ಅಮಾವಾಸ್ಯೆ ಕಳೆಯುತ್ತದೆ. ಆನಂತರ ಒಳ್ಳೆಯ ಸಮಯ ಅಂತ ಹೇಳಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಸಮಯ ಕೇಳಿಕೊಂಡು ನಿಮಗೆ ಸಮಯ ತಿಳಿಸುತ್ತವೆ ಎಂದರು.

ರೈತರ ಹಿತ ಮುಖ್ಯ :

ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಮಾಡಬೇಕು ಎಂದು ಕೊಂಡಿದ್ದೇನೆ. ಹಣಕಾಸು ಪರಿಸ್ಥಿತಿ ತಕ್ಕಂತೆ ಸೂಕ್ತವಾದ ನಿರ್ಧಾರ ತೆಗೆದುಕೊಂಡು, ರೈತರ ಹಿತವನ್ನು ಗಮನದಲ್ಲಿರಿಸಿ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.

error: Content is protected !!