ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ದೀಕ್ಷಿತಾ (19), ಮಧು (19) ಎಂಬ ಬಂಧಿತರಿಂದ 30 ಸಾವಿರ ನಗದು, 200ಗ್ರಾಂ ನಷ್ಟು ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ತಾನು ಪ್ರೀತಿ ಮಾಡುತ್ತಿದ್ದ ಮಧು ಬಳಿ ಖರ್ಚಿಗೆ ಹಣವಿಲ್ಲ ಎಂದಿದ್ದಕ್ಕೆ ಬಿಕಾಂ ಓದುತ್ತಿದ್ದ ದೀಕ್ಷಿತಾ ಖತರ್ನಾಕ್ ಫ್ಲಾನ್ ಮಾಡಿದ್ದಳು ಎನ್ನಲಾಗಿದೆ. 15 ವರ್ಷದ ಹುಡುಗನಿಗೆ 33 ಲಕ್ಷ ರು ಸಂಬಳದ ಆಫರ್ ಕೊಟ್ಟ ಅಮೇರಿಕಾ ಕಂಪನಿ !
ಮಾಟ ಮಂತ್ರದ ಮಂಕು ಬೂದಿ ಎರಚಿ ದೊಡ್ಡಪ್ಪನ ಮನೆಯಲ್ಲೇ ಕಳ್ಳತನ ಮಾಡಲು ಮೆಡಿಕಲ್ ಓದುತ್ತಿದ್ದ ಲವರ್ ಮಧು ಜೊತೆ ಸೇರಿ ಇಬ್ಬರು ಪ್ಲಾನ್ ಸಿದ್ಧಪಡಿಸಿದ್ದಳಂತೆ. ಇದರಂತೆ ಮಾಟ ಮಂತ್ರದ ವಸ್ತುಗಳನ್ನು ಮನೆಯ ಕಾಂಪೌಂಡ್ನಲ್ಲಿಟ್ಟು ಮನೆಯವರ ಗಮನ ಬೇರೆಡೆ ಸೆಳೆದಿದ್ದರು.
ಪ್ಲಾನ್ನಂತೆ ಮನೆಯ ಕಾಂಪೌಂಡ್ ಬಳಿ ನಿಂಬೆ ಹಣ್ಣು ಎಲ್ಲಾ ಇಟ್ಟು ಮನೆಯವರೆಲ್ಲರನ್ನು ದೀಕ್ಷಿತಾ ಹೊರಗೆ ಕರೆದಿದ್ದಳು. ಮನೆಯವರು ಹೊರ ಬರುತ್ತಿದ್ದಂತೆ ಮನೆಯ ಮುಂದೆ ಯಾರೋ ವಾಮಾಚಾರ ಮಾಡಿದ್ದಾರೆ ಎಂದು ಯುವತಿ ಕಥೆ ಕಟ್ಟಿದ್ದಳು. ಒಂದೇ ನಾಣ್ಯಕ್ಕೆ ಎರಡು ಮುಖಗಳು(ಬ್ಯಾಂಕರ್ಸ್ ಡೈರಿ)
ಮಾಟ ಮಂತ್ರದ ವಸ್ತುಗಳನ್ನು ಶುಚಿಗೊಳಿಸುವ ಗ್ಯಾಪ್ನಲ್ಲಿ ತನ್ನ ಕೈಚಳಕ ತೋರಿದ್ದ ಮಧು, ಮನೆಯಲ್ಲಿದ್ದ 90 ಸಾವಿರ ರೂಪಾಯಿ ಹಣ, 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು.
ಈ ಘಟನೆ ಕುರಿತಂತೆ ದೂರು ಬಂದ ತಕ್ಷಣ ವಿಚಾರಣೆ ಆರಂಭಿಸಿದ ಪೊಲೀಸರಿಗೆ ಲವ್ವರ್ಸ್ ಕಳ್ಳಾಟ ತಿಳಿದು ಬಂದಿದೆ. ಬಂಧಿತ ದೀಕ್ಷಿತಾ, ಬಿಕಾಂ ಓದುತ್ತಿದ್ದು, ಮಧು ಮೆಡಿಕಲ್ ಓದುತ್ತಿದ್ದ. ಖರ್ಚು ಮಾಡಲು ಹಣವಿಲ್ಲದ ಕಾರಣ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More
ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More
(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More
ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More
ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನು ಅಮಾನತು ಮಾಡಿ ಜೆಡಿಎಸ್… Read More
This website uses cookies.
Leave a Comment