January 30, 2026

Newsnap Kannada

The World at your finger tips!

araga

ಡಿಕೆಶಿ ಕಮಿಷನ್ ವಿಚಾರ : ಉಗ್ರಪ್ಪ ದೂರು ಕೊಟ್ಟರೆ ಕಾನೂನು ಕ್ರಮ – ಗೃಹ ಸಚಿವ ಜ್ಞಾನೇಂದ್ರ

Spread the love

ಭ್ರಷ್ಟಾಚಾರದ ಬಗ್ಗೆ ಪಿಸು ಪಿಸು ಮಾತನಾಡುವುದನ್ನು ಬಿಟ್ಟು ತಮ್ಮ ನಾಯಕರ ಬಗ್ಗೆ ಸದಾ ಉಗ್ರವಾಗಿ ಮಾತಾಡೋ ಉಗ್ರಪ್ಪ ಕಂಪ್ಲೇಂಟ್ ಕೊಡಲಿ ಎಂದು ಮಂಡ್ಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ,

ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜ್ಙಾನೇಂದ್ರ ಕಂಪ್ಲೇಂಟ್ ಕೊಡೋಕೆ ಹೇಳಿ.
ಪಿಸಿ ಪಿಸಿ ಮಾತಾಡೋದನ್ನು ದೂರು. ಎಂದು ಕಟ್ಟಿಕೊಳ್ಳೋಕೆ ಬರಲ್ಲ. ನಿರ್ಧಿಷ್ಟವಾಗಿ ಕಂಪ್ಲೇಂಟ್ ಕೊಟ್ಟರೆ, ನಮ್ಮ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ಯಾವಾಗಲೂ ಗಟ್ಟಿ ಧ್ವನಿಯಲ್ಲಿ ಮಾತಾಡೋ ಉಗ್ರಪ್ಪ ಕಂಪ್ಲೇಂಟ್ ಕೊಟ್ಟರೆ ಏನಾಗುತ್ತೆ?
ಉಗ್ರಪ್ಪರ ಕಂಪ್ಲೇಂಟ್ ನಿಂದ ಇನ್ನಷ್ಟು ಬಲ ಬರುತ್ತೆ.


ಬಲ ಬರೋ ದೃಷ್ಟಿಯಿಂದ ಕಂಪ್ಲೇಂಟ್ ಕೊಡೋದು ಒಳ್ಳೆಯದು. ಸದಾ ಉಗ್ರವಾಗಿ ಮಾತಾಡೋರು ಉಗ್ರಪ್ಪ. ಈಗ ಪಿಸಿ ಪಿಸಿ ಮಾತಾಡೋದ್ರಲ್ಲಿ ಅರ್ಥವಿಲ್ಲ. ಭ್ರಷ್ಟಾಚಾರದ ವಿರುದ್ಧ ನಿಜವಾಗಿಯೂ ಹೋರಾಟ ಮಾಡಲಿ ಅಂತಾ ಆಶಿಸುತ್ತೇನೆ ಎಂದರು.

error: Content is protected !!