ಡಿಕೆಶಿ ನೇ ಮಹಾನ್ ನಾಯಕ : ಸಿಡಿದೆದ್ದ ಗೋಕಾಕ್ ಸಾಹುಕಾರ್ “ನಾನು ಗಂಡಸು…ಅವನು ಗಾ…”

Team Newsnap
1 Min Read

ನಾನು ಗಂಡಸು, ಆದರೆ ಆ ಮಹಾನಾಯಕ ಗಾ…,! ತಪ್ಪು ಮಾಡಿದ್ರೆ ಆ ಮಹಾನಾಯಕನನ್ನು ಒದ್ದು ಒಳಗೆ ಹಾಕಲಿ. ನಾನು ಡಿಕೆಶಿಗೆ ಕ್ರಿಮಿನಲ್ ಬುದ್ದಿ ಇದೆ. ಆತನೇ ಈ ಸಿಡಿ ಷಡ್ಯಂತ್ರ ರೂಪಿಸಿದರು. ಆತನ ವಿರುದ್ಧ ದೂರು ಕೊಡುವೆ ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ಭರಿತರಾಗಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಆ ಮಹಾ ನಾಯಕ ಯಾರು ಎಂಬ ಸತ್ಯವನ್ನು ಯುವತಿಯ ಪೋಷಕರು ಎಸ್ಐಟಿಗೆ ತಿಳಿಸಿದ್ದಾರೆ ಎಂದು ಹೇಳಿದರು. ನಾನೂ ಕೂಡ ಆತನೇ ಈ ಸಿಡಿ ಸೂತ್ರಧಾರ ಎಂದು ಹೇಳುತ್ತೇನೆ ಎಂದರು.

ಸಿಡಿ ಲೇಡಿ ಆರೋಪಗಳಿಗೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಕುಮಾರ್ ಇಂದು ತಮ್ಮ ಅಸಲಿ ಆಟ ಶುರು ಮಾಡಿಕೊಂಡಿ ದ್ದಾನೆ. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾದ ಡಿಕೆಶಿ ಮಹಾನಾಯಕನೇ ಕಾರಣ ಎಂದು ಸಿಡಿದೆದ್ದರು.

ನನ್ನ ಬಳಿ 11 ವಿವಿಧ ರೀತಿಯ ಸಾಕ್ಷಿಗಳಿವೆ ಎಂದಿದ್ದಾರೆ. ಆದರೆ ಆ ಸಾಕ್ಷಿಗಳು ಯಾವುವು ಎಂಬ ಗುಟ್ಟು ರಟ್ಟು ಮಾಡುವುದಿಲ್ಲ.

ಆ ಮಹಾ ನಾಯಕ ರಾಜಕಾರಣಕ್ಕೆ ನಾಲಾಯಕ್, ಅವನ ವಿರುದ್ಧ ನಾನು ನೇರವಾಗಿ ಹೋರಾಟಕ್ಕೆ ಇಳಿಯುತ್ತೇನೆ. ಈ ಬಾರಿ ಕನಕಪುರದಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಅವನನ್ನು ಸೋಲಿಸುವುದಾಗಿ ಶಪಥ ಮಾಡಿದರು.

Share This Article
Leave a comment