ಲೋಕಾ ದಾಳಿಗೆ ಒಳಗಾಗಿದ್ದ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಅಮಾನತು

Team Newsnap
1 Min Read

ದೇವನಹಳ್ಳಿ: ಲೋಕಾಯುಕ್ತ ದಾಳಿಗೆ ಒಳಗಾಗಿ ಕೋಟ್ಯಾಂತರ ಆಸ್ತಿ , ಹಣ ವಾಹನ ಹೊಂದಿದ್ದ ದೇವನಹಳ್ಳಿ ತಹಶೀಲ್ದಾರ್ ಶಿವ ರಾಜ್ ಅವರನ್ನು ಸರ್ಕಾರ ಅಮಾನತ್ತುಗೊಳಿಸಿದೆ.

ತಹಶೀಲ್ದಾರ್ ಕೆ.ಶಿವರಾಜ್ ಕಳೆದ ತಿಂಗಳು ವರ್ಗಾವಣೆಗೊಂಡಿದ್ದರೂ ಕೆಎಟಿಯಲ್ಲಿ ತಡೆಯಾಜ್ಞೆ ತಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು.

ಆಗಸ್ಟ್ 17-18 ರಂದು ಏಕಕಾಲದಲ್ಲಿ ದೇವನಹಳ್ಳಿ ತಹಶೀಲ್ದಾರ್ ಕೆ ಶಿವರಾಜ್ ಅವರ ನಿವಾಸ ಸಂಬಂದಿಕರು ಆಪ್ತರ ಮನೆಗಳ ಕಚೇರಿಗಳ ಮೇಲೆ 18 ಕಡೆ ಲೋಕಾಯುಕ್ತರ ದಾಳಿಗೆ ಒಳಗಾಗಿದ್ದರು.ಸಿಇಒ ದುಂಡು ಮೇಜಿನ ಸಭೆ: ನೆದರ್ಲೆಂಡ್ಸ್ ಪ್ರಧಾನಿ ಜತೆ ಸರ್ಕಾರದ ವಿಸ್ತೃತ ಚರ್ಚೆ

ಇಷ್ಟಾದರೂ ಸಹ ಇಲ್ಲಿಯೇ ಸೇವೆ ಮುಂದುವರಿಸಿದ್ದ ತಹಶಿಲ್ದಾರ್ ಶಿವರಾಜ್‌ರು ತಮ್ಮ ಆದಾಯಕ್ಕಿಂತ ಶೇ 225 ರಷ್ಟು ಪಟ್ಟು ಆಸ್ತಿ , ಹಣ , ವಾಹನಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತುಗೊಳಿಸಲು ಲೋಕಾಯುಕ್ತರು ಸೂಚನೆ ನೀಡಿದ್ದರಿಂದ ಸರ್ಕಾರದ ಕಂದಾಯ ಇಲಾಖೆಯ ಅಧಿನ ಕಾರ್ಯದರ್ಶಿ ಮುಕ್ತಾರ ಪಾಷ ಎಚ್.ಜಿ. ರವರು ಅಮಾನತ್ತು ಮಾಡಿ ಸೋಮವಾದಿಂದಲೇ ಜಾರಿಗೆ ಬರುವಂತೆ ಆದೇಶ ಹೊಡಿಸಿದ್ದಾರೆ.

Share This Article
Leave a comment