Karnataka

ಬೆಂಗಳೂರಿನಲ್ಲಿ ಕುರುಬರ ಸಮಾವೇಶ ರಸ್ತೆ ಸಂಚಾರದ ಪರ್ಯಾಯ ಮಾರ್ಗಗಳ ವಿವರ

ಬೆಂಗಳೂರಿನಲ್ಲಿ ಕುರುಬರ ಸಮಾವೇಶದ ಹಿನ್ನಲೆಯಲ್ಲಿ ಭಾನುವಾರ
ರಸ್ತೆ ಸಂಚಾರದ ಪರ್ಯಾಯ ಮಾರ್ಗಗಳ ಬದಲಾವಣೆ ಮಾಡಲಾಗಿದೆ.

ಕೆಲವು ಮುಖ್ಯ ರಸ್ತೆಗಳಲ್ಲಿ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.
ಭಾರಿ ಪ್ರಮಾಣದ ಟ್ರಾಫಿಕ್​ನಿಂದ ಪಾರಾಗಲು ಬದಲಿ ಮಾರ್ಗದ ಮಾಹಿತಿಯ ಸಮಗ್ರ ವಿವರ ಇಲ್ಲಿದೆ.

  • ಭಾರೀ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.
  • ತುಮಕೂರು ಮೂಲಕ ಬರುವ ವಾಹನಗಳು ಹೈದರಾಬಾದ್ ರಸ್ತೆ ತಲುಪಬೇಕಾದರೆ ಡಾಬಸ್‌ಪೇಟೆ – ದೊಡ್ಡಬಳ್ಳಾಪುರ – ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೂಲಕ ತಲುಪಬೇಕಿದೆ.
  • ಹೈದರಾಬಾದ್ ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸುವವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ – ದೊಡ್ಡಬಳ್ಳಾಪುರ – ಡಾಬಸ್‌ಪೇಟೆ ಮಾರ್ಗವಾಗಿ ತುಮಕೂರು ರಸ್ತೆಯನ್ನು ತಲುಪಬೇಕು. ತುಮಕೂರು ರಸ್ತೆಯಿಂದ ಹೊಸೂರು
  • ಮೈಸೂರು ರಸ್ತೆ ಮಾರ್ಗ ಪ್ರವೇಶಿಸಬೇಕಾದಲ್ಲಿ ಡಾಬಸ್‌ಪೇಟೆ – ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್, ಮಾಗಡಿ – ಮಾಗಡಿ ರಸ್ತೆ ನೈಸ್ ರೋಡ್ ಮೂಲಕ ಹೊಸೂರು, ಮೈಸೂರು ರಸ್ತೆಯನ್ನು ಸಂಪರ್ಕಿಸಬಹುದು.
  • ಮೈಸೂರು ಹಾಗೂ ಹೊಸೂರು ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸಬೇಕಾದವರು ನೈಸ್ ಜಂಕ್ಷನ್ – ಮಾಗಡಿ ರಸ್ತೆ ನೈಸ್ ರೋಡ್ – ಮಾಗಡಿ – ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ – ಡಾಬಸ್‌ಪೇಟೆ ಮಾರ್ಗವಾಗಿ ತುಮಕೂರು ರಸ್ತೆ ಹೋಗಬಹುದು.
  • ನೇರ ಬೆಂಗಳೂರಿಗೆ ತಲುಪಬೇಕಾದ ಭಾರೀ ವಾಹನಗಳು ಸಂಜೆಯವರೆಗೂ ಡಾಬಸ್‌ಪೇಟೆ ಪಾರ್ಕಿಂಗ್ ಸ್ಥಳದಲ್ಲಿ ಕಾಯಬೇಕು.
  • ಕುರುಬರ ಸಮಾವೇಶ ಮುಗಿದು ಪೊಲೀಸರ ಸೂಚನೆ ನಂತರವಷ್ಟೆ ಬೆಂಗಳೂರನ್ನು ಪ್ರವೇಶಿಸಲು ಅವಕಾಶ ನೀಡಲಾಗುವುದು.
  • ಬೆಂಗಳೂರು ನಗರದಿಂದ ತುಮಕೂರು ರಸ್ತೆ ಹಾಗೂ ಹಾಸನ ರಸ್ತೆ ಸಂಪರ್ಕಿಸಬೇಕಾದವರು ಮಾಗಡಿ ರಸ್ತೆ ಬಳಸುವುದು ಸೂಕ್ತ. ಬೆಂಗಳೂರು ನಗರ -ಮಾಗಡಿ ರಸ್ತೆ – ಮಾಗಡಿ – ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್‌ನಿಂದ ಹಾಸನ ರಸ್ತೆ ತಲುಪಬಹುದು. ಅಥವಾ ಬೆಂಗಳೂರು ನಗರ -ಮಾಗಡಿ ರಸ್ತೆ – ಮಾಗಡಿ – ಗುಡೆಮಾರನಹಳ್ಳಿ ಹ್ಯಾಂಡ್ – ಡಾಬಸ್‌ಪೇಟೆ ಮುಖಾಂತರ ತುಮಕೂರು ರಸ್ತೆ ತಲುಪಬಹುದಾಗಿದೆ.
Team Newsnap
Leave a Comment
Share
Published by
Team Newsnap

Recent Posts

ಡಿ.20 ರಿಂದ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಸಿಎಂ

ಬೆಂಗಳೂರು : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಡಿಸೆಂಬರ್‌ 20 ರಿಂದ ಮೂರು… Read More

June 25, 2024

ವಿಷಯುಕ್ತ ಮದ್ಯ ಸೇವಿಸಿ 58 ಮಂದಿ ದುರ್ಮರಣ

ಚೆನ್ನೈ : ವಿಷಯುಕ್ತ ಮದ್ಯ ಕುಡಿದು ತಮಿಳು ನಾಡಿನಲ್ಲಿ 58 ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್, ದುರಂತದಲ್ಲಿ… Read More

June 25, 2024

ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ‘ಹಾಲಿಗೆ’ 2.10 ರೂ ಹೆಚ್ಚಳ

ಬೆಂಗಳೂರು: ಪೆಟ್ರೋಲ್‌, ಡಿಸೇಲ್‌ ಮೇಲಿನ ಸೆಸ್‌ ದರವನ್ನು ಹೆಚ್ಚಿದ ರಾಜ್ಯ ಸರ್ಕಾರ ಇದೀಗ ಹಾಲಿನ ದರವನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ.… Read More

June 25, 2024

ನಿವೃತ್ತ ಸಿಜಿಎಂ ಎ.ಕೆ.ಸಿಂಗ್ ‘ಬಂಧನ್ ಬ್ಯಾಂಕ್’ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ನೇಮಕ

ಇಂದು ರಿಸರ್ವ್ ಬ್ಯಾಂಕ್ , ಎ.ಕೆ.ಸಿಂಗ್ ಅವರನ್ನು ಬಂಧನ್ ಬ್ಯಾಂಕಿನ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಿದೆ. ಆರ್‌ಬಿಐನ ಮುಖ್ಯ ಜನರಲ್… Read More

June 25, 2024

ಪುನೀತ್ ಮತ್ತೆ ಹುಟ್ಟಿ ಬಂದರೆ ಮಗಳ ಹೊಟ್ಟೆಯಲ್ಲಿ : ಆತ್ಮ ಸಂಭಾಷಣೆ ಯಲ್ಲಿ ಪುನೀತ್ ಹೇಳಿಕೆ

ಬೆಂಗಳೂರು: ಕಳೆದ ಮೂರು ವರ್ಷಗಳ ಹಿಂದೆ ಹಠಾತ್ ನಿಧನರಾದ ಪುನೀತ್ ರಾಜ್ ಕುಮಾರ್ ಪುನರ್ ಜನ್ಮದಲ್ಲಿ ಮಗಳ ಹೊಟ್ಟೆಯಲ್ಲಿ ಹುಟ್ಟಿ… Read More

June 24, 2024

ಸರ್ಕಾರಿ ನೌಕರರಿಗೆ 27% ವೇತನ ಹೆಚ್ಚಳ : ಸಿಎಂ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಶೇಕಡಾ 27 %ರಷ್ಟು ವೇತನ… Read More

June 20, 2024