ನವದೆಹಲಿಯಲ್ಲಿ ಜ. 26 ರಂದು ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದೀಪ್ ಸಿಧುನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ರೈತರ ಪ್ರತಿಭಟನೆಯ ಜೊತೆಯಲ್ಲೇ ಕೆಂಪುಕೋಟೆಯಲ್ಲಿ ಧರ್ಮದ ಧ್ವಜ ಹಾರಾಟ ಮಾಡಿರುವ ಪ್ರಕರಣಕ್ಕೆ ಸರಕಾರಕ್ಕೆ ಮಾತ್ರವಲ್ಲ ರೈತ ಮುಖಂಡರ ಆಕ್ರೋಶ ವ್ಯಕ್ತವಾಗಿತ್ತು.
ಈ ನಡುವೆ ನಟ ದೀಪ್ ಸಿಧು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದ. ಈ ನಡುವಲ್ಲೇ ದೀಪ್ ಸಿಧು ಆಡಿಯೋ ವೈರಲ್ ಆಗಿತ್ತು. ಕೊನೆಗೆ ದೆಹಲಿ ಪೊಲೀಸರು ನಟ ದೀಪ್ ಸಿಧುವನ್ನು ಬಂಧಿಸಿದ್ದಾರೆ.