ಮಾನ ನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಡಿ.ರೂಪಾಗೆ ಹೈಕೋರ್ಟ್ ರಿಲೀಫ್ ನೀಡಿದೆ.
ನಿವೃತ್ತ ಡಿಜಿಪಿ ಎಚ್.ಎನ್ಸತ್ಯನಾರಾಯಣ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಹೈಕೋರ್ಟ್ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.
ಕಾರಾಗೃಹ ಇಲಾಖೆಯ ಡಿಐಜಿ ಆಗಿದ್ದ ವೇಳೆ, ಶಶಿಕಲಾ ನಟರಾಜನ್ ಬಳಿ ಲಂಚ ಪಡೆದ ಆರೋಪದ ಮೇಲೆ ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು.
ಈ ಬಗ್ಗೆ ತಡೆ ನೀಡುವಂತೆ ರೂಪಾ ಹೈಕೋರ್ಟ್ ಮೊರೆಹೋಗಿದ್ದರು. ಇನ್ನು ಅರ್ಜಿ ಸಂಬಂಧ ಎಚ್.ಎನ್ . ಸತ್ಯನಾರಾಯಣ ಅವರಿಗೆ ಹೈಕೋರ್ಟ್ ನೋಟಿಸ್ ನೀಡಿದೆ.