ರಾಮನಗರ : ಸರ್ಕಾರಿ ವಾಹನದಲ್ಲಿ ಪ್ರಧಾನಿ ಭಾವಚಿತ್ರ ವಿರೂಪ – ಬಿಜೆಪಿ ಕಾರ್ಯಕರ್ತರ ಭಾರಿ ಆಕ್ರೋಷ.

Team Newsnap
1 Min Read

ರಾಮನಗರ : ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ ವಿರೋಧಿಸಿ ರಾಮನಗರದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯು ಮತ್ತೊಂದು ಸ್ವರೂಪಕ್ಕೆ ತಿರುಗಿತು .

ನಗರದ ಪ್ರಮುಖವೃತ್ತದಲ್ಲ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ ವೇಳೆಯಲ್ಲಿಯೇ ಪಶು ಸಂಗೋಪನಾ ಇಲಾಖೆ ವಾಹನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇಲಾಖೆಯ ಸಚಿವರ ಭಾವ ಚಿತ್ರವಿತ್ತು. ಪ್ರಧಾನಿ ಮೋದಿ ಭಾವಚಿತ್ರವನ್ನು ವಿರೂಪಗೊಳಿಸಿದ್ದನ್ನು ಕಂಡ ಕಾರ್ಯಕರ್ತ ಭಾರಿ ಆಕ್ರೋಷ ವ್ಯಕ್ಯಪಡಿಸಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರು.

image

ವಿರೂಪಗೊಂಡಿದ್ದಮೋದಿ ಭಾವ ಚಿತ್ರವನ್ನು ಉದ್ದೇಶ ಪೂರ್ವಕವಾಗಿ ಬದಲಾಯಿಸದ ಇಲಾಖೆ ಅಧಿಕಾರಿಗಳ ವಿರುದ್ಧವೂ ಪ್ರತಿಭಟನಾಕಾರರು ದಿಕ್ಕಾರ ಕೂಗಿ ಜಿಪಂ ಸಿಇಓ ಅವರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು .ಸರ್ಕಾರದಿಂದ ಪದವಿ ಕೋರ್ಸ್​ಗಳಿಗೆ ಶೇ10 % ರಷ್ಟು ಶುಲ್ಕ ಏರಿಸಲು ಸೂಚನೆ

ಈ ವೇಳೆ ಕೆಲವು ಕಾಲ ಪ್ರತಿಭಟನಾ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು . ಬಿಗಿ ಪೋಲಿಸ್ ಬಂದೋಬಸ್ತು ಏರ್ಪಡಿಸಲಾಗಿದೆ .

Share This Article
Leave a comment