ಮನೆಯಿಂದ ಮುನಿಸಿಕೊಂಡು ಹೋಗಿದ್ದ ಅಕ್ಕ-ತಂಗಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಅಶ್ವಿನಿ (16)ಹಾಗೂ ನಿಶ್ಚಿತಾ(14 ) ಎಂಬ ಇಬ್ಬರು ಬಾಲಕಿಯರು, ನಗರದ ಕಂದವಾರ ಕೆರೆಯಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.
ಅಗಲಗುರ್ಕಿಯ ಮುನಿಸ್ವಾಮಿ ಹಾಗೂ ಮುನಿಲಕ್ಷಿ ದಂಪತಿಯ ಪುತ್ರಿಯರಾದ ಅಶ್ವಿನಿ, ನಿಶ್ಚಿತಾ, ಮುನಿಸಿಕೊಂಡು ಮನೆಯಿಂದ ಹೊರಟಿದ್ದರು.
ಈ ಇಬ್ಬರು ಇದೀಗ ಶವವಾಗಿ ಕಂದವಾರ ಕೆರೆಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.