Trending

ಭಾರತದ ಟ್ರಂಪ್ ಅಭಿಮಾನಿ ಸಾವು

ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದ ದಿನನಿಂದ ಭಾರತದ ತೆಲಂಗಾಣ ರಾಜ್ಯದ ಟ್ರಂಪ್ ಅಭಿಮಾನಿಯೊಬ್ಬ ಅವರಿಗೆ ಆರೋಗ್ಯ ಕೋರಿ ಉಪವಾಸ ಕುಳಿತಿದ್ದ.‌ ಆಹಾರದ ಕೊರತೆ ಮತ್ತು ನಿದ್ರೆಯ ಕೊರತೆಯಿಂದ ಆ ಅಭಿಮಾನಿ ಇಂದು ನಿಧನನಾಗಿದ್ದಾನೆ.

ತೆಲಂಗಾಣದ ತುಫ್ರಾನ್ ನಿವಾಸಿ ಬುಸಾ ಕೃಷ್ಣಾ ರಾಜು ಟ್ರಂಪ್ ಪರಮ ಅಭಿಮಾನಿ. ಟ್ರಂಪ್ ಅವರಿಗೆ ಕೊರೋನಾ ಧೃಡಪಟ್ಟ ಹಿನ್ನಲೆಯಲ್ಲಿ ಈತ ಅವರ ಆರೋಗ್ಯ ಚೇತರಿಕೆಗೋಸ್ಕರ ಉಪವಾಸ ವ್ರತ ಕೈಗೊಂಡಿದ್ದ. ಆದರೆ ರಾಜುವಿಗೆ ಉಪವಾಸ ಮತ್ತು ನಿದ್ರೆಯ ಕೊರತೆಯಿಂದ ಹೃದಯಾಘಾತವಾಗಿದೆ‌. ಈತ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದ್ದ ಕೃಷ್ಣ ರಾಜುವಿಗೆ ರಾಜಕೀಯದಲ್ಲಿ ಅತ್ಯಂತ ಆಸಕ್ತನಾಗಿದ್ದನೆಂದು ಅಲ್ಲಿನವರು ಹೇಳುತ್ತಾರೆ. ಮುಂಬರುವ ಅಮೇರಿಕಾ ಚುಣಾವಣೆಯಲ್ಲಿ ಮತ್ತೊಮ್ಮೆ ಟ್ರಂಪ್ ಅಧ್ಯಕ್ಷರಾಗುತ್ತಾರೆ ಎಂದು ಈತ ಕಾಯುತ್ತಿದ್ದಾ ಎನ್ನುತ್ತಾರೆ ಗ್ರಾಮಸ್ಥರು.

ಟ್ರಂಪ್ ಅವರ ಮೂರ್ತಿಯನ್ನು ಮನೆಯಲ್ಲಿ ಮಾಡಿಸಿಟ್ಟುಕೊಂಡಿದ್ದ ಈತ ದಿನಾ ಮೂರ್ತಿಗೆ ಪೂಜೆ ಮಾಡುತ್ತಿದ್ದನಂತೆ. ಊರವರೆಲ್ಲರೂ ಈತನನ್ನು ಟ್ರಂಪ್ ಕೃಷ್ಣ ಎಂದೇ ಕರೆಯುವುದು ವಾಡಿಕೆಯಾಗಿತ್ತಂತೆ. ಟ್ರಂಪ್ ಅನಾರೋಗ್ಯದ ಹಿನ್ನಲೆಯಲ್ಲಿ ಈತ ಕೆಲವು ದಿನಗಳಿಂದ ಉಪವಾಸವಿದ್ದನೆಂದು ಹೇಳುತ್ತಾರೆ ಸ್ಥಳೀಯರು.

Team Newsnap
Leave a Comment
Share
Published by
Team Newsnap

Recent Posts

ಅಕ್ಷಯ ತೃತೀಯ ಬಂತು ಮತ್ತೇ ಖುಷಿಯ ತಂತು

ಅಕ್ಷಯ ತೃತೀಯ ಹಿಂದುಗಳಿಗೆ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ, ಅಕ್ಷಯ ಎಂದರೆ ಶಾಶ್ವತ ಎಂದರ್ಥ! ಸ್ನೇಹಾ ಆನಂದ್ 🌻 ಈ… Read More

May 10, 2024

SSLC ವಿದ್ಯಾರ್ಥಿನಿಯ ಬರ್ಬರ ಹತ್ಯೆ

ಮಡಿಕೇರಿ :ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಅಮಾನುಷ ಕೃತ್ಯ ನಡೆದಿದ್ದು, ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯ ಭೀಕರ ಹತ್ಯೆ ನಡೆದಿದೆ. ಮೀನಾ… Read More

May 10, 2024

ಎಸ್ ಎಸ್ ಎಲ್ ಸಿ ಕಡಮೆ ಅಂಕ : ಮದ್ದೂರಿನಲ್ಲಿ ಇಬ್ಬರ ವಿದ್ಯಾರ್ಥಿ ಗಳು ಆತ್ಮಹತ್ಯೆ

ಮದ್ದೂರು : ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದ ವಿ ಇಬ್ಬರ… Read More

May 9, 2024

ಸೋಮವಾರದ ತನಕವೂ ರೇವಣ್ಣ ಜೈಲು ಹಕ್ಕಿ

ಬೆಂಗಳೂರು : ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ನಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಸೋಮವಾರದವರೆಗೆ… Read More

May 9, 2024

SSLC ಫಲಿತಾಂಶ : ಬಾಲಕಿಯರೇ ಮೇಲುಗೈ ಉಡುಪಿ ಪ್ರಥಮ- ಯಾದಗಿರಿ ಕೊನೆ

ಎಸ್ಎಸ್ಎಲ್ ಸಿ 2024ರ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಉಡುಪಿಗೆ ಪ್ರಥಮ ಸ್ಥಾನ ಲಭ್ಯವಾಗಿದೆ.8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ… Read More

May 9, 2024

ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ

ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More

May 8, 2024