ಕಾಶಿಯಲ್ಲಿ ಸಾವು ಕೂಡ ಶುಭಕರ: ಕನ್ನಡ ಗ್ರಂಥ ಉಲ್ಲೇಖಿಸಿದ ಮೋದಿ

Team Newsnap
1 Min Read

ಕಾಶಿಯಲ್ಲಿ ಸಾವು ಕೂಡ ಶುಭಕರ.

ನಮ್ಮ ಪಾಪವನ್ನು ಕಾಶಿ ವಿಶ್ವನಾಥ ನಿವಾರಿಸುತ್ತಾನೆ ಎಂದು ಕನ್ನಡದ ಪ್ರಖ್ಯಾತ ಗ್ರಂಥವೊಂದರಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರಧಾನಿ ಮೋದಿ ಕಾಶಿಯಲ್ಲೂ ಕನ್ನಡ ಡಿಂಡಿಮ ಮೊಳಗಿಸಿದರು

ದಿವ್ಯ ಕಾಶಿ, ಭವ್ಯ ಕಾಶಿ ಯೋಜನೆ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಕಾಶಿಯಲ್ಲಿ ಸಾವು ಕೂಡ ಶುಭಕರ. ನಮ್ಮ ಪಾಪವನ್ನು ಕಾಶಿ ವಿಶ್ವನಾಥ ನಿವಾರಿಸುತ್ತಾನೆ ಎಂದು ಕನ್ನಡದ ಪ್ರಖ್ಯಾತ ಗ್ರಂಥವೊಂದರಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಕಾಶಿ ಅಭಿವೃದ್ದಿ ಯೋಜನೆಗೆ ಯಾವುದೇ ತೊಂದರೆಯಿಲ್ಲ. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಕೇಂದ್ರವೂ ಈ ಯೋಜನೆ ಪೂರ್ಣಗೊಳಿಸಲಿದೆ. ಕಾಶಿಯಲ್ಲಿ ಸಾವು ಶುಭಕರ, ವಿಶ್ವನಾಥ ನಮ್ಮೆಲ್ಲರ ಪಾಪಗಳನ್ನು ನಿವಾರಿಸುತ್ತಾನೆ ಎಂದು ಕನ್ನಡದ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಹೀಗೆಂದು ಮಧ್ವಾಚಾಯ೯ರು ತನ್ನ ಶಿಷ್ಯರಿಗೆ ಹೇಳಿದ್ದರು ಎಂದು ನೆನೆದರು ಮೋದಿ.

Share This Article
Leave a comment