Categories: Main News

ಅಪ್ಪ,ಈ ಸಂಬಂಧಗಳನ್ನು ಅರ್ಥೈಸುವುದು ಹೇಗೆ ?

ಅಪ್ಪ ನನ್ನಪ್ಪ…..

ನಿನಗೆ ಮನವಿ ಪೂರ್ವಕ ಶುಭಾಶಯಗಳು………

ಭ್ರಷ್ಟನಾಗದಿರು ಅಪ್ಪ ಇನ್ನು ಮುಂದಾದರು,
ಜಾತಿಗೆ ಅಂಟಿಕೊಳ್ಳದಿರು ಅಪ್ಪ ಇನ್ನು ಮುಂದಾದರು,
ಶೋಷಿತರ ಪರವಾಗಿ ಧ್ವನಿ ಎತ್ತು ಅಪ್ಪ ಇನ್ನು ಮುಂದಾದರು,
ಮೌಡ್ಯವನ್ನು ತೊರೆದು ವೈಚಾರಿಕ ಪ್ರಜ್ಞೆ ಬೆಳೆಸಿಕೋ ಅಪ್ಪ ಇನ್ನು ಮುಂದಾದರು,
ಸ್ವಾರ್ಥವ ಗೆದ್ದು ಸಮಾಜ ಮುಖಿಯಾಗು ಅಪ್ಪ ಇನ್ನು ಮುಂದಾದರು,
ಮನುಷ್ಯ ಸಂಬಂಧಗಳಿಗೆ ಮಹತ್ವ ಕೊಡು ಅಪ್ಪ ಇನ್ನು ಮುಂದಾದರು,

ಗಾಳಿ ನೀರು ಆಹಾರ ಮಲಿನ ಮಾಡದಿರು ಅಪ್ಪ ಇನ್ನು ಮುಂದಾದರು,
ಹೆಂಡ ಸಿಗರೇಟು ಗುಟ್ಕಾ ಮಾರದಿರು ಅಪ್ಪ ಇನ್ನು ಮುಂದಾದರು,
ಚುನಾವಣೆಯಲ್ಲಿ ನಿನ್ನನ್ನು ಮಾರಿ ಕೊಳ್ಳದಿರು ಅಪ್ಪ ಇನ್ನು ಮುಂದಾದರು,

ಅಪ್ಪಾ…………

ಸ್ವಲ್ಪ ಇಲ್ಲಿ ನೋಡಪ್ಪಾ…

ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. ( ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ ಸ್ವಲ್ಪ ಬದಲಾವಣೆ ಕಾಣುತ್ತಿದೆ. )

ಈ ದೇಶದ ಇಂದಿನ ಎಲ್ಲಾ ಪರಿಸ್ಥಿತಿಗಳ ಬಹುಮುಖ್ಯ ಪಾತ್ರದಾರಿ ಅಪ್ಪ, ಅಮ್ಮ ಪೋಷಕ ಪಾತ್ರದಾರಿ ಮಾತ್ರ.

ಇವತ್ತಿನ ಸಂದರ್ಭದಲ್ಲಿ ನಿಮಗೆ ನಮ್ಮ ಒಟ್ಟು ವ್ಯವಸ್ಥೆಯ ಬಗ್ಗೆ ಹೆಮ್ಮೆಯಿದ್ದರೆ ಅದಕ್ಕೆ ಅಪ್ಪ ಕಾರಣ ಅಥವಾ ಇದರ ಬಗ್ಗೆ ಅತೃಪ್ತಿ ಅಸಹನೆ ಇದ್ದರೆ ಅದಕ್ಕೂ ಅಪ್ಪನೇ ಕಾರಣ.

ಅಪ್ಪ, ಈ ಸಂಬಂಧವನ್ನು ಅರ್ಥೈಸುವುದು ಹೇಗೆ.

ಸ್ವಂತ ಮಕ್ಕಳು ಅಪ್ಪನನ್ನು ಆಕಾಶಕ್ಕೆ ಏರಿಸುತ್ತವೆ, ನನ್ನ ಅಪ್ಪನಂತ ಅಪ್ಪ ಯಾರೂ ಇಲ್ಲ, ಆತನೇ ಪ್ರತ್ಯಕ್ಷ ದೇವರು, ನನ್ನ ಸ್ಪೂರ್ತಿ, ನನ್ನ ಮಾರ್ಗದರ್ಶಕ, ನನ್ನ ಬದುಕು ಕಲಿಸಿದವ ಮುಂತಾಗಿ ವರ್ಣಿಸುತ್ತಾರೆ. ( ಕೆಲವು ಅಪರೂಪದ ಪ್ರಕರಣಗಳಲ್ಲಿ ಅಪ್ಪ ಮತ್ತು ಮಕ್ಕಳ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯ ದ್ವೇಷ ಅಸೂಯೆ ಹೊಡೆದಾಟಗಳು ಸಹ ಇವೆ )

ಹಾಗಾದರೆ ಅಪ್ಪಂದಿರೆಲ್ಲಾ ಶ್ರೇಷ್ಠವೇ, ಅಪ್ಪ ಅತ್ಯಂತ ಒಳ್ಳೆಯ ವ್ಯಕ್ತಿಯೇ, ಅಪ್ಪ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಯೇ ?
ಅಪ್ಪ ಇದು ವೈಯಕ್ತಿಕ ಸಂಬಂಧ ಮಾತ್ರವೇ ?…..

ಇಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಸಾಮಾನ್ಯವಾಗಿ ಅಪ್ಪ ತನ್ನ ಮಕ್ಕಳಿಗಾಗಿ ಎಲ್ಲವನ್ನೂ ಮಾಡುತ್ತಾನೆ. ತನ್ನ ತನು ಮನ ಧನಗಳನ್ನು ಮಕ್ಕಳಿಗೆ ಅರ್ಪಿಸುತ್ತಾನೆ. ಒಂದು ರೀತಿಯ ತ್ಯಾಗ ಜೀವಿ…

ಅಪ್ಪನ ಇನ್ನೊಂದು ಮುಖವೂ ಇದೆ.

ಬಹಳಷ್ಟು ಅಪ್ಪಂದಿರು ಕೌಟುಂಬಿಕವಾಗಿ ತುಂಬಾ ಒಳ್ಳೆಯವರೇ ಆಗಿರಬಹುದು ಆದರೆ ‌ಈ ವ್ಯವಸ್ಥೆಯಲ್ಲಿ ಅದೇ ಅಪ್ಪ ತುಂಬಾ ಕೆಟ್ಟವನು ಆಗಿರುತ್ತಾನೆ. ತನ್ನ ಮಕ್ಕಳ ಶ್ರೇಯೋಭಿವೃದ್ದಿಗೆ ಕಾನೂನು ಬಾಹಿರ ಅನೈತಿಕ ವ್ಯವಹಾರಗಳನ್ನು ಮಾಡುತ್ತಿರುತ್ತಾನೆ. ಇಡೀ ವ್ಯವಸ್ಥೆಯ ಅಧೋಗತಿಗೆ ತಾನೂ ಕಾರಣನಾಗಿರುತ್ತಾನೆ.

ಇಲ್ಲಿ ಒಂದು ಸೂಕ್ಷ್ಮತೆ ಅಡಗಿದೆ. ನೀವು ನಿಮ್ಮ ಮಕ್ಕಳನ್ನು ಎಷ್ಟೇ ಪ್ರೀತಿಯಿಂದ, ಎಷ್ಟೇ ಶಿಸ್ತಿನಿಂದ, ಎಷ್ಟೇ ಪ್ರಾಮಾಣಿಕರಾಗಿ ಬೆಳೆಸಿದರು ಅದರ ಫಲಿತಾಂಶ ಈ ವ್ಯವಸ್ಥೆ ಎಷ್ಟು ಆ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಈ ಸಮಾಜದಲ್ಲಿ ನೀವು, ನಿಮ್ಮ ಮಕ್ಕಳು, ನಿಮ್ಮ ಕುಟುಂಬ ಮಾತ್ರ ವಾಸಿಸುತ್ತಿಲ್ಲ. ನಿಮ್ಮಂತೆಯೇ ಅನೇಕ ಕುಟುಂಬಗಳ ಒಟ್ಟು ವ್ಯವಸ್ಥೆ ಈ ಸಮಾಜ. ನೀವು ಕಲಿಸುವ ಮೌಲ್ಯಗಳು ಸಮಾಜದಲ್ಲಿ ಉಪಯೋಗಕ್ಕೆ ಬರಬೇಕಾದರೆ ಅದನ್ನು ಉಳಿಸಬೇಕಾದ ಜವಾಬ್ದಾರಿ ಸಹ ಅಪ್ಪನದೇ ಆಗಿರುತ್ತದೆ.

ಪ್ರೀತಿ ಕರುಣೆ ಸರಳತೆ ಕ್ಷಮಾಧಾನ ಪ್ರಾಮಾಣಿಕತೆ ಸತ್ಯ ಶ್ರಮ ದಕ್ಷತೆ ಎಲ್ಲವೂ ಅಡಕವಾಗಿರುವ ವ್ಯಕ್ತಿತ್ವ ತನ್ನ ನಿಜ ಸ್ವರೂಪದಲ್ಲಿ ಅರಳಲು ನಮ್ಮ ಸಾಮಾಜಿಕ ವ್ಯವಸ್ಥೆಯೂ ಅದಕ್ಕೆ ಪೂರಕವಾಗಿರಬೇಕು. ಅಪ್ಪ ಭ್ರಷ್ಟನಾಗಿ ಆ ಹಣವನ್ನು ತಂದು ತನ್ನ ಮಕ್ಕಳನ್ನು ಪ್ರೀತಿಯಿಂದ ಸಾಕಿದರೆ ಮುಂದೆ ಅದೇ ಸಾಮಾಜಿಕ ವ್ಯವಸ್ಥೆಯಲ್ಲಿ ಬೆಳೆದು ದೊಡ್ಡವರಾಗುವ ಮಕ್ಕಳಿಗೆ ಖಂಡಿತ ಭ್ರಷ್ಟ ವ್ಯವಸ್ಥೆಯ ವಿವಿಧ ಮುಖಗಳು ಪರಿಚಯವಾಗುತ್ತದೆ. ಆಗ ಆ ಮಕ್ಕಳು ತುಂಬಾ ನಿರಾಶರಾಗಿ ಜಿಗುಪ್ಸೆ ಹೊಂದಬಹುದು ಅಥವಾ ವ್ಯವಸ್ಥೆಯ ಭಾಗವಾಗಿ ತಾವು ಭ್ರಷ್ಟರಾಗಬಹುದು.

ಇವತ್ತಿನ ಸಾಮಾಜಿಕ ಮೌಲ್ಯಗಳು ಹೇಗಿವೆ ಎಂದರೆ ಪ್ರೀತಿ ತನ್ನ ಮೂಲ ಸ್ವರೂಪದಲ್ಲಿ ಉಪಯೋಗವೇ ಬರುವುದಿಲ್ಲ. ಪ್ರೀತಿಯ ತರಹ ಇರಬೇಕು, ನಿಜವಾದ ಪ್ರೀತಿ ಮಾಡಬಾರದು. ಮಾಡಿದರೆ ಹುಚ್ಚರಾಗುವಿರಿ. ಅದೇರೀತಿ ಸ್ನೇಹದ ತರಾ ಇರಬೇಕು, ಒಳ್ಳೆಯವರ ತರಹ ಇರಬೇಕು, ಪ್ರಾಮಾಣಿಕರ ತರಾ ಇರಬೇಕು, ಸತ್ಯದ ತರಹ ಇರಬೇಕು. ನಿಜವಾಗಿಯೂ ಅದನ್ನು ಹೇಳಬಾರದು. ಆಗ ಅದು ಹೆಚ್ಚು ಮೌಲ್ಯ ಪಡೆಯುತ್ತದೆ. ಅಂದರೆ ಬ್ಯಾಲೆನ್ಸ್ ಅಥವಾ ಮ್ಯಾನೇಜ್ ಎಂಬ ಸ್ಥಿತಿಗೆ ಬಂದು ತಲುಪಿದೆ. ನಿಜವಾದ ಮಾನವೀಯ ಮೌಲ್ಯಗಳ ಜಾಗದಲ್ಲಿ ಕೃತಕತೆ ಬಂದು ಕುಳಿತಿದೆ.

ಈ ಸನ್ನಿವೇಶದಲ್ಲಿ ಅಪ್ಪ ಮಕ್ಕಳಿಗೆ ಹೇಳಿ ಕೊಡುವ ಪಾಠವಾದರೂ ಏನು. ಅಪ್ಪ ಹೇಳಿಕೊಡುವುದಕ್ಕಿಂತ ತಾನು ಏನು ಅನುಸರಿಸುತ್ತಾನೆ, ಹೇಗೆ ನಡೆದುಕೊಳ್ಳುತ್ತಾನೆ ಎಂಬುದು ಮುಖ್ಯ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಮಕ್ಕಳು ದೊಡ್ಡವರು ಹೇಳುವುದಂತೆ ಮಾಡುವುದಿಲ್ಲ ಅವರು ಮಾಡಿದಂತೆ ಮಾಡುತ್ತಾರೆ.

ಆದ್ದರಿಂದ ಅಪ್ಪ ಎಂಬುದು ಕೇವಲ ವೈಯಕ್ತಿಕ ಸಂಬಂಧ ಮತ್ತು ಜವಾಬ್ದಾರಿ ಮಾತ್ರವಲ್ಲ ಸಾಮಾಜಿಕ ಸಂಬಂಧ ಮತ್ತು ಜವಾಬ್ದಾರಿಯೂ ಇದೆ. ಅದರ ನಿರ್ವಹಣೆಯಲ್ಲಿ ಆತ ವಿಫಲನಾಗಿರುವುದೇ ಇಂದಿನ ಅನೇಕ ಸಮಸ್ಯೆಗಳಿಗೆ ಮೂಲ ಕಾರಣ.

ಪರಿಸರದಿಂದ ಪಾರಮಾರ್ಥಿಕದವರೆಗೆ ಅಪ್ಪನ ವ್ಯಕ್ತಿತ್ವದ ಪ್ರತಿಬಿಂಬಿವೇ ಈ ಸಮಾಜ. ಅಪ್ಪ ನೀನು ನಮ್ಮ ಕುಟುಂಬದ ಅಪ್ಪ ಮಾತ್ರವಲ್ಲ ಈ ದೇಶ ಈ ಸಮಾಜಕ್ಕೂ ಅಪ್ಪನೇ. ಅದನ್ನು ನೀನು ಅರಿತುಕೊಂಡು ಜೀವಿಸುವುದೇ ನಿನ್ನ ಮಕ್ಕಳಿಗೆ ನೀನು ಕೊಡುವ ಬಹುದೊಡ್ಡ ಕೊಡುಗೆ…..

ಆ ದಿನಗಳು ಬೇಗ ಬರಲಿ ಎಂದು ಆಶಿಸುತ್ತಾ…….

ಅಪ್ಪನ ದಿನದ ಸಾರ್ಥಕತೆಯ ನಿರೀಕ್ಷೆಯಲ್ಲಿ………

  • ವಿವೇಕಾನಂದ ಹೆಚ್ ಕೆ
Team Newsnap
Leave a Comment
Share
Published by
Team Newsnap

Recent Posts

ಸೋಮವಾರದ ತನಕವೂ ರೇವಣ್ಣ ಜೈಲು ಹಕ್ಕಿ

ಬೆಂಗಳೂರು : ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ನಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಸೋಮವಾರದವರೆಗೆ… Read More

May 9, 2024

SSLC ಫಲಿತಾಂಶ : ಬಾಲಕಿಯರೇ ಮೇಲುಗೈ ಉಡುಪಿ ಪ್ರಥಮ- ಯಾದಗಿರಿ ಕೊನೆ

ಎಸ್ಎಸ್ಎಲ್ ಸಿ 2024ರ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಉಡುಪಿಗೆ ಪ್ರಥಮ ಸ್ಥಾನ ಲಭ್ಯವಾಗಿದೆ.8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ… Read More

May 9, 2024

ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ

ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More

May 8, 2024

SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು

ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್‌ಕಲ್ ಮಲ್ಲಾಪೂರು… Read More

May 8, 2024

ನಾಳೆ ( May 9 ) SSLC ಫಲಿತಾಂಶ ಪ್ರಕಟ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024