ಹಲವು ದಿನಗಳಿಂದ ಚೀನಾವು ಭಾರತದ ಮೇಲೆ ತನ್ನ ಹದ್ದಿನ ಬೇಹುಗಣ್ಣುಳನ್ನು ಇಟ್ಟಿರುವುದು ನಮಗೆ ಗೊತ್ತಿರುವ ವಿಚಾರ. ಇಂದು ದೆಹಲಿಯ ಪೋಲೀಸರು ಭಾರತದಿಂದ ಚೀನಾಕ್ಕೆ ಮಾಹಿತಿ ರವಾನಿಸುತ್ತಿದ್ದ ಒಬ್ಬ ನೇಪಾಳಿ ವ್ಯಕ್ತಿ ಹಾಗೂ ಒಬ್ಬ ಚೀನಿ ವ್ಯಕ್ತಿಯನ್ನು ಬಂಧಿಸಿದ್ದರು.
ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಷ್ಟ್ರೀಯ ಮಾಹಿತಿ ಸಂಸ್ಥೆಯ ಎಲ್ಲಾ ಮಾಹಿತಿಗಳು ಸೈಬರ್ ಅಪರಾಧದ ಮೂಲಕ ನಾಶವಾಗಿವೆ. ಹೀಗೆ ಸೈಬರ್ ಅಪರಾಧಗಳು ದಿನೇ ದಿನೇ ಭಾರತದಲ್ಲಿ ಹೆಚ್ಚುತ್ತಿವೆ.
ಇಂದು ರಾಷ್ಟ್ರೀಯ ಭದ್ರತಾ ದಳದ ಮುಖ್ಯಸ್ಥ ಅಜಿತ್ ದೋವಲ್ ದೇಶದಲ್ಲಿ ಸುಮಾರು ಶೇ ೫೦೦ ರಷ್ಟು ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ವರ್ಚುವಲ್ ಸೈಬರ್ ಸಮ್ಮೇಳನ ‘ಕೋಕಾನ್ ೨೦೨೦’ ರಲ್ಲಿ ಮಾತನಾಡಿರುವ ದೋವಲ್ ಅವರು ‘ಭಾರತದಲ್ಲಿ ಏರಿಕೆಯಾಗುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು ಭಾರತ ಸರ್ಕಾರವು ಶೀಘ್ರದಲ್ಲೇ ಸೈಬರ್ ಭದ್ರತಾ ತಂತ್ರ – ೨೦೨೦ನ್ನು ಜಾರಿಗೆ ತರುತ್ತಿದೆ’ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ.
‘ದೇಶದಲ್ಲಿ ನಗದು ನಿರ್ವಹಣೆ ಕಡಿಮೆಯಾದ ನಂತರ ಎಲ್ಲ ಪಾವತಿಗಳು ಜಾಲತಾಣಗಳ ಮುಖಾಂತರವೇ ಆಗುತ್ತಿವೆ. ಜಾಲತಾಣಗಳಿಂದಲೇ ಹೆಚ್ಚಿನ ಮಾಹಿತಿ ಸೋರಿಕೆಯಾಗುತ್ತಿದೆ. ಅಲ್ಲದೇ ನಾಗರೀಕರು ಸೈಬರ್ ಅಪರಾಧದ ಬಗ್ಗೆ ಸೀಮಿತ ಅರಿವನ್ನು ಹೊಂದಿದ್ದಾರೆ’ ಎಂದು ಅವರು ಹೇಳಿದರು.
ರಾಷ್ಟ್ರೀಯ ಸೈಬರ್ ಭದ್ರತಾ ತಂತ್ರ – ೨೦೨೦ ಸೈಬರ್ ಸುರಕ್ಷತೆ, ನೈರ್ಮಲ್ಯ ಹಾಗೂ ಜಾಗೃತಿಗೆ ಆದ್ಯತೆ ನೀಡುವದಲ್ಲದೇ, ಈ ಮೂರು ಅಂಶಗಳಡಿ ಎಲ್ಲಾ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿದೆ.
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment