Editorial

ಬಯಲಾಟದ ಅಗೋಚರ ಪ್ರತಿಭೆ ಷಡಕ್ಷರಯ್ಯ ಸೊಪ್ಪಿಮಠ – ನೆನಪು

ಓಂಕಾರೇಶ್,
ಸಂವಹನ ವಿಭಾಗದ ವಿದ್ಯಾರ್ಥಿ
ಬೆಂಗಳೂರು ವಿಶ್ವವಿದ್ಯಾಲಯ
ಜ್ಞಾನ ಭಾರತಿ ಆವರಣ.

ಇದು ಕೊಪ್ಪಳದ ಸುತ್ತಮುತ್ತಲ ಹಳ್ಳಿಗಳ ಬಯಲಾಟದ ಕಲಾವಿದರಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿರುವ ಹೆಸರು. ಷಡಕ್ಷರಯ್ಯನವರು ಕೊಪ್ಪಳದ ಮುದ್ದಾಬಳ್ಳಿ ಎಂಬ ಹಳ್ಳಿಯವರು. ಇವರು ಕೊಪ್ಪಳದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಯಲಾಟ ಕಲಿಸುತ್ತಿದ್ದ ಮೇಷ್ಟ್ರು. ಬಯಲಾಟದ ಮಾಂತ್ರಿಕ ಎಂದೇ ಆ ಭಾಗದಲ್ಲಿ ಖ್ಯಾತಿ ಪಡೆದವರು. ಇವರು ನಿರ್ದೇಶಿಸಿದ ಬಯಲಾಟಗಳೆಲ್ಲವೂ ಇವರಿಗೆ ಈ ಖ್ಯಾತಿಯನ್ನ ತಂದುಕೊಟ್ಟಿವೆ.

ಷಡಕ್ಷರಯ್ಯ ಸೊಪ್ಪಿಮಠ ಕೊಪ್ಪಳದ ಮುದ್ದಾಬಳ್ಳಿಯಲ್ಲಿ ಜೂನ್ 4, 1916 ರಂದು ಜನಿಸಿದರು. ತಂದೆ ಸಂಗಯ್ಯ ಸೊಪ್ಪಿಮಠ, ತಾಯಿ ಕೊಟ್ರಮ್ಮ. ಮುದ್ದಾಬಳ್ಳಿ ಮತ್ತು ಗೊಂಡಬಾಳಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. 1940ರ ದಶಕದ ಆಸುಪಾಸಿನಲ್ಲಿ ಯಾರಾದರೂ 7ನೇ ತರಗತಿಯವರೆಗೂ ಓದಿದ್ದರೆ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕನ ಕೆಲಸ ಸಿಗುತ್ತಿತ್ತು. ಆದರೆ ಇವರು ನಾನು ಇನ್ನೊಬ್ಬರ ಅಡಿಯಲ್ಲಿ ಕೆಲಸ ಮಾಡುವದಿಲ್ಲ ಎಂದು ಹೇಳಿ ಬಯಲಾಟವನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಿದರು. ‘ಸಂಪೂರ್ಣ ರಾಮಾಯಣ’ ‘ಹೇಮರೆಡ್ಡಿ ಮಲ್ಲಮ್ಮ’ ‘ರಾಮಾಂಜನೇಯ ಯುದ್ಧ’ ‘ಕರ್ಣ ಪರ್ವ’ ಇವರು ನಿರ್ದೇಶಿಸಿದ ಬಯಲಾಟಗಳಲ್ಲಿ ಕೆಲವು ಪ್ರಮುಖವಾದವು. ಅಲ್ಲದೇ ‘ರಕ್ತ ರಾತ್ರಿ’ ಎಂಬ ನಾಟಕವನ್ನೂ ನಿರ್ದೇಶನ ಮಾಡಿದ್ದಾರೆ.

ಬಯಲಾಟವೆಂಬುದು ಯಕ್ಷಗಾನದ ಒಂದು ರೂಪ. ಇದು ನೃತ್ಯ ಮತ್ತು ನಾಟಕಗಳ ಮಿಶ್ರಣ. ಈ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡ ಷಡಕ್ಷರಯ್ಯನವರು ತಮ್ಮ ಊರಿನಲ್ಲಿ ಹಾಗೂ ಸುತ್ತ ಮುತ್ತಲ ಹಳ್ಳಿಗಳಲ್ಲಿ ಈ ಕಲೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತರಾದರು. ತಮ್ಮ ಊರಿನಲ್ಲಿದ್ದ ಕೃಷಿ ಭೂಮಿಯಿಂದ ಮತ್ತು ಬಯಲಾಟ ಕಲಿಸುತ್ತಿದ್ದುದ್ದರಿಂದ ಬರುತ್ತಿದ್ದ ದವಸ, ಧಾನ್ಯಗಳೇ ಇವರ ಕುಟುಂಬದ ಆದಾಯದ ಮೂಲ.

ಸ್ವಲ್ಪ ಕಾಲದ ನಂತರ ಬಯಲಾಟದ ಪ್ರದರ್ಶನಗಳ ಬೇಡಿಕೆ ಕುಗ್ಗಿದ್ದರಿಂದ ಇವರ ಬಯಲಾಟದ ಚಟುವಟಿಕೆಗಳು ಬರುಬರುತ್ತಾ ಕಡಿಮೆಯಾಯಿತು. ಇದೇ ಸಮಯದಲ್ಲಿ ಧಾರಾವಾಡದಲ್ಲಿ ಆಕಾಶವಾಣಿ ಕೇಂದ್ರ ಪ್ರಾರಂಭವಾದ ನಂತರ ಇವರ ಪ್ರತಿಭೆಯನ್ನು ಗುರುತಿಸಿ ರೇಡೀಯೋ ನಾಟಕಗಳನ್ನು ಮಾಡಲು ಕೇಳಿಕೊಂಡಿತು. ಷಡಕ್ಷರಯ್ಯನವರು ಧಾರವಾಡದ ಆಕಾಶವಾಣಿಗೆ ಅನೇಕ ಬಯಲಾಟಗಳನ್ನು ತಮ್ಮ ತಂಡದಿಂದ ನಿರ್ದೇಶನ ಮಾಡಿಕೊಟ್ಟರು.

ಬಯಲಾಟ ಕಲಿಸುವದರ ಜೊತೆಗೆ ಇವರು ತಬಲಾ ವಾದನ, ಹಾರ್ಮೋನಿಯಂ ನುಡಿಸುವುದು, ಪಿಟೀಲು ನುಡಿಸುವುದು, ರಂಗ ಗೀತೆಗಳನ್ನು ಹಾಡುವುದು ಮುಂತಾದವುಗಳಲ್ಲಿ ಪರಿಣಿತರಾಗಿದ್ದರು. ಕನ್ನಡದ ಜೊತೆಗೆ ಉರ್ದು, ತೆಲುಗು, ಹಿಂದಿ ಭಾಷೆಗಳನ್ನ ಓದಲು, ಬರೆಯಲು ಕಲಿತಿದ್ದರು. ಅಲ್ಲದೆ ಪುರಾಣ-ಪ್ರವಚನಗಳ ವಾಚನ, ಕೀರ್ತನೆಗಳ ವಾಚನ, ಜ್ಯೋತಿಷ್ಯ ಶಾಸ್ತ್ರ, ಮುಂತಾದವುಗಳಲ್ಲಿ ಸಹ ಪರಿಣಿತರಾಗಿದ್ದರು. ಇವರು ರೇಡಿಯೋ ನಾಟಕಕ್ಕಾಗಿ ಬರೆದ ನಾಟಕದ ಕೆಲವು ಹಸ್ತ ಪ್ರತಿಗಳನ್ನ ಹಂಪಿ ಕನ್ನಡ ವಿಶ್ವವಿದ್ಯಾಲಯದವರು ಸಂಗ್ರಹಿಸಿ ಇಟ್ಟಿದ್ದಾರೆ.

ಜೀವನಪೂರ್ತಿ ಬಯಲಾಟ ಕಲಿಸಲು ಬೇರೆ ಬೇರೆ ಊರುಗಳಿಗೆ ಓಡಾಡಿದ ಇವರು ಅಗೋಚರ ಪ್ರತಿಭೆಯಾಗಿಯೇ ತಮ್ಮ ಬದುಕನ್ನು ಕಳೆದರು. ಯಾವ ಸಂಘ ಸಂಸ್ಥೆಯವರು, ಸರ್ಕಾರದ ಯಾವ ಸಾಂಸ್ಕೃತಿಕ ಇಲಾಖೆಯವರು ಇವರ ಶ್ರಮವನ್ನು ಗುರುತಿಸಲಿಲ್ಲ. ಸರ್ಕಾರದಿಂದ ಕಲಾವಿದರಿಗಾಗಿ ಕೊಡುವ ಮಾಶಾಸನಕ್ಕೆ ಅರ್ಜಿ ನೀಡಿದರೂ, ಮಾಶಾಸನ ದೊರೆತದ್ದು ಇವರ ಮರಣಾನಂತರ. ಷಡಕ್ಷರಯ್ಯನವರು ತಮ್ಮ ಕೊನೆಗಾಲದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿ ಫೆಬ್ರುವರಿ 1, 1983ರಲ್ಲಿ ನಿಧನರಾದರು.

Team Newsnap
Leave a Comment
Share
Published by
Team Newsnap

Recent Posts

ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು : 10 ವರ್ಷದ ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ನಂಬಿಸಿ ಕಾಮುಕನೊಬ್ಬ ಅತ್ಯಾಚಾರ ಎಸೆಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ… Read More

May 20, 2024

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ : ಸಿಎಂ ಸಿದ್ದು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಪ್ಲೆಸ್ ಕ್ಲಬ್… Read More

May 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 20 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,400 ರೂಪಾಯಿ ದಾಖಲಾಗಿದೆ. 24… Read More

May 20, 2024

ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ

ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?! ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ ,… Read More

May 20, 2024

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024