ಕೋಟ್ಯಾಂತರ ರು ಪಂಗನಾಮ ಹಾಕಿದ ಮಹಿಳೆಗೆ ಸ್ಯಾಂಡಲ್ ವುಡ್ ನಟ, ಸಹೋದರರೂ ಸಾಥ್

Team Newsnap
1 Min Read

ಚಿಕ್ಕಬಳ್ಳಾಪುರ ನಗರದ ಮಹಾವಂಚಕಿ ಜೊತೆಗೆ ಕನ್ನಡ ಸಿನಿಮಾ ನಟನೊಬ್ಬ ಸೇರಿ ಸಿಕ್ಕ ಸಿಕ್ಕವರಿಗೆ ಕೋಟ್ಯಾಂತರ ರು ಪಂಗನಾಮ‌ ಹಾಕಿದ ಪ್ರಕರಣ ದಾಖಲಾಗಿದೆ.

ಅರ್ಚನಾ ಎಂಬ ಮಹಿಳೆಯೇ ವಂಚನೆ ಜಾಲದ ರುವಾರಿ. ಈ ಪ್ರಕರಣ ದಲ್ಲಿ ಸ್ಯಾಂಡಲ್​ವುಡ್​ ನಟ ಶಂಕರ್​ 2ನೇ ಆರೋಪಿ. ಈತ ಅರ್ಚನಾಳ ಪ್ರಿಯಕರ ಕೂಡ ಹೌದು ಎನ್ನಲಾಗಿದೆ.

ಇವರ ಜತೆಗೆ ಅರ್ಚನಾ ಸಹೋದರ ಹರೀಶ್​ ಮತ್ತು ಶ್ರೀಪತಿ 3 ಮತ್ತು 4ನೇ ಆರೋಪಿಗಳಾಗಿದ್ದಾರೆ. ಈ ನಾಲ್ವರು ಸೇರಿ ಮಾಡಿದ ಮಹಾವಂಚನೆಯಿಂದ ಜನ ಮೋಸ ಹೋಗಿದ್ದಾರೆ.‌

ಬೆಂಗಳೂರು, ಹೈದರಬಾದ್, ಮುಂಬೈನಲ್ಲಿ ಅರ್ಚನಾ ತನ್ನ ವಂಚನೆಯ ಬಲೆಯನ್ನು ಬೀಸಿದ್ದಳು. ನನ್ನ ಬಳಿ ರೈಸ್ ಪುಲ್ಲಿಂಗ್ ಚೆಂಬು ಇತ್ತು. ಅದನ್ನು ವಿದೇಶದ ವ್ಯಕ್ತಿಗೆ ಮಾರಾಟ ಮಾಡಿದ್ದೇನೆ. ಇದರಿಂದ, 6 ಲಕ್ಷ 36 ಸಾವಿರ ಕೋಟಿ ರು ಆದಾಯ ಬಂದಿದೆ. ಆರ್​ಬಿಐ ಮೂಲಕ ಈ ಹಣ ಪಡೆಯಲು 240 ಕೋಟಿ ರು. ತೆರಿಗೆ ಕಟ್ಟಬೇಕು. ಟ್ಯಾಕ್ಸ್ ಕಟ್ಟಲು ಹಣವಿಲ್ಲ. ನೀವು ಕೊಟ್ಟರೆ ತೆರಿಗೆ ಪಾವತಿಸಿ ಆರ್​ಬಿಐ ನಿಂದ ಎಲ್ಲಾ ಹಣವನ್ನೂ ಪಡೆಯುವೆ. ಆ ಕೂಡಲೇ ನಿಮ್ಮ ಹಣವನ್ನು ವಾಪಸ್​ ಮಾಡುವೆ ಎಂದು ಕಥೆ ಹೇಳಿ ಹಲವರ ಬಳಿ ಕೋಟಿ ಕೋಟಿ ಹಣ ಪೀಕಿದ್ದಾಳೆ.

ಅದೇ ರೀತಿ ಬೆಂಗಳೂರು ಮೂಲದ ಉದ್ಯಮಿ ವಂಶಿಕೃಷ್ಣ ಬಳಿ 2.2.ಕೋಟಿ ಹಣ ಪಡೆದು ಕೈ ಎತ್ತಿದ್ದಾಳೆ ಎಂದು ವಂಶಿಕೃಷ್ಣ ಚಿಕ್ಕಬಳ್ಳಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಅರ್ಚನಾಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಅರ್ಚನಾ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸ್ಯಾಂಡಲ್​ವುಡ್ ನಟ ಶಂಕರ್ ಸಾಥ್ ಕೊಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ. ಶಂಕರ್​ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಅರ್ಚನಾಗೂ ಶಂಕರ್​ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.

Share This Article
Leave a comment