ಒಂದೆಡೆ ಜಮೀನಿನಲ್ಲಿ ಬಿದ್ದಿರುವ ತೆಂಗಿನ ಗಿಡಗಳು . ಮತ್ತೊಂದೆಡೆ ಕಿತ್ತೆಸೆದಿರುವ ಟೊಮೆಟೋ ಸಸಿಗಳು.. ಇನ್ನೊಂದು ಕಡೆ ಕಣ್ಣೀರು ಹಾಕಿ ಗೋಳಾಡುತ್ತಿರುವ ರೈತರು..
ಇದನ್ನು ಓದಿ –ಚಿತ್ರನಟ ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
- ಈ ಮನಕಲಕುವ ದೃಶ್ಯಗಳು ಕಂಡುಬಂದಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎ ಶ್ಯಾನುಬೋಗನಹಳ್ಳಿಯಲ್ಲಿ. ವೈಯಕ್ತಿಕ ದ್ವೇಷದಿಂದಾಗಿ
ಬೆಳೆ ನಾಶ ಮಾಡಿಕೊಂಡ ಎ ಶ್ಯಾನುಬೋಗನಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್ ಕುಟುಂಬ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ.
1 ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು. ಆದರೀಗ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯನ್ನು ನಾಶ ಮಾಡಿದ್ದು, ರೈತ ಕುಟುಂಬದ ಜೀವನ ಅತಂತ್ರವಾಗಿದ್ದು, ನ್ಯಾಯ ಕೊಡಿಸಿ ಎಂದು ಅಂಗಾಲಾಚಿದ್ದಾರೆ.
ಕುಟುಂಬಕ್ಕೂ ಬಹಿಷ್ಕಾರ :
ಈ ಜಮೀನಿನ ಮೇಲೆ ಕಣ್ಣು ಹಾಕಿದ್ದ ಗ್ರಾಮದ ಕೆಲವರು ಈ ವಿಚಾರವಾಗಿ ತಗಾದೆ ತೆಗೆದು ಜಮೀನು ಬಿಟ್ಟು ಕೊಡವಂತೆ ಕೇಳಿದ್ದರು. ಈ ವಿಚಾರದಲ್ಲಿ ಗ್ರಾಮದಲ್ಲಿ ಕೆಲವು ಬಾರಿ ಗಲಾಟೆ ಕೂಡ ನಡೆದು ರಾಜಿ ಪಂಚಾಯಿತಿ ಕೂಡ ಆಗಿತ್ತು. ಜಮೀನು ಬಿಟ್ಟು ಕೊಡಲು ಒಪ್ಪದಿದ್ದ ಈ ಕುಟುಂಬವನ್ನು ಹೇಗಾದರೂ ಮಾಡಿ ಗ್ರಾಮದಿಂದ ಓಡಿಸಿ ಈ ಜಮೀನು ಕಬಳಿಸಬೇಕೆಂದು ನಿರ್ಧರಿಸಿದ ಕೆಲವರು ಈ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿಸಿದ್ದಾರೆ.
ಬಹಿಷ್ಕಾರದ ಬಳಿಕ ಸೋಮವಾರ ರಾತ್ರಿ ಆ ರೈತ ಕುಟುಂಬ ವ್ಯವಸಾಯ ಮಾಡ್ತಿದ್ದ ಜಮೀನಿನಲ್ಲಿ ಬೆಳೆದಿದ್ದ 70 ತೆಂಗಿನ ಸಸಿಗಳು ಸೇರಿ 7 ಸಾವಿರ ಟೊಮೆಟೋ ಸಸಿಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಕಿಡಿಗೇಡಿಗಳ ದುಷ್ಕೃತ್ಯಕ್ಕೆ ರೈತ ಕುಟುಂಬ ಹಿಡಿಶಾಪ ಹಾಕುತ್ತಿದೆ.
ಈ ಘಟನೆ ಸಂಬಂಧ ನೊಂದ ರೈತ ಕುಟುಂಬ ನಾಗಮಂಗಲ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದೆ. ತಾಲೂಕು ಆಡಳಿತ ಸೇರಿ ಸ್ಥಳೀಯ ಶಾಸಕರಿಗೂ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ