March 10, 2026

Newsnap Kannada

The World at your finger tips!

kapiula river

ಕಪಿಲಾ ನದಿಗೆ ಹಾರಿದ ಯುವ ಪ್ರೇಮಿಗಳು : ಪ್ರಾಣ ರಕ್ಷಿಸಿದ ಅಂಬಿಗರು

Spread the love

ಯುವತಿ ಮನೆಯವರು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ. ಯುವ ಪ್ರೇಮಿಗಳಿಬ್ಬರು ನಂಜನಗೂಡಿನ ಬಳಿ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಜರುಗಿದೆ.

ಚಾಮರಾಜನಗರ ಹೆಬ್ಬಸೂರು ಗ್ರಾಮದ 17 ವಷ೯ದ ಅಪ್ರಾಪ್ತ ಯುವತಿ ಹಾಗೂ ಸೋಮವಾರ ಪೇಟೆ ಅಭಿ ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು.

ಯುವತಿಯು ಚಾಮರಾಜನಗರದ ಜೆಎಸ್ ಎಸ್ ಕಾಲೇಜಿನ ವಿದ್ಯಾಥಿ೯ನಿ. ಅಭಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಾನೆ
ಯುವತಿಯ ಮನೆಯವರಿಗೆ ಪ್ರೀತಿಯ ವಿಷಯ ತಿಳಿದು ವಿರೋಧ ವ್ಯಕ್ತಪಡಿಸಿ ಆಕೆಯನ್ನು ಅಜ್ಜಿ ಮನೆಯಲ್ಲಿ ಇರಿಸಿದ್ದರು.

ತನ್ನ ಮನೆಯವರ ವತ೯ನೆ ಕಂಡ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಿಯಕರ ಅಭಿಗೆ ಮಾಹಿತಿ ನೀಡಿದಾಗ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿಧಾ೯ರ ಮಾಡಿ ಮುಡುಕಟ್ಟೆ ಬಳಿ ಕಪಿಲಾ ನದಿಗೆ ಒಟ್ಟಿಗೆ ಹಾರಿದ್ದಾರೆ. ನದಿಗೆ ಬಿದ್ದ ಪ್ರೇಮಿಗಳನ್ನು ತೆಪ್ಪದಲ್ಲಿದ್ದ ಅಂಬಿಗರು ಕಾಪಾಡಿ ನಂಜನಗೂಡು ಸಕಾ೯ರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ನಂಜಗೂಡು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!