ತೆಲುಗಿನ ಹಿನ್ನೆಲೆ ಗಾಯಕಿಯೊಬ್ಬರ ತಂದೆಯ ಶವ ಯಲಹಂಕದ ರೈಲ್ವೆ ನಿಲ್ದಾಣ ಬಳಿ ಪತ್ತೆಯಾಗಿದೆ.
ಎ.ಕೆ.ರಾವ್ ಮೃತದೇಹ ರೈಲ್ವೆ ನಿಲ್ದಾಣ ಬಳಿ ಪತ್ತೆಯಾಗಿದೆ
ಇವರು ತೆಲುಗು ಹಿನ್ನೆಲೆ ಗಾಯಕಿ ಹರಿಣಿ ಅವರ ತಂದೆ ಎಂದು ಗುರುತಿಸಲಾಗಿದೆ.
ಚಾಕುವಿನಿಂದ ಇರಿದ ಪರಿಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪ್ರಶ್ನೆಯಾಗಿದೆ.
ಎ.ಕೆ.ರಾವ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಎ.ಕೆ.ರಾವ್ ಅವರು ಸದ್ದುಗುಂಟೆಪಾಳ್ಯದಲ್ಲಿ ವಂಚನೆ ಪ್ರಕರಣದ ಆರೋಪಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಇದು ಕೊಲೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.