ಕಾಂಗ್ರೆಸ್​ ಪಾದಯಾತ್ರೆ: ಸರ್ಕಾರಕ್ಕೆ ಛೀ ಮಾರಿ – ಒಂದು ದಿನ ಡೆಡ್​​ಲೈನ್ ಕೊಟ್ಟ ಹೈಕೋರ್ಟ್

Team Newsnap
1 Min Read

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ಪ್ರಶ್ನಿಸಿ ​ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಶ್ರೀಧರ್ ಪ್ರಭು ಮನವಿಯನ್ನು ಪುರಸ್ಕರಿಸಿ ಹೈಕೋಟ್ ೯ ಪೀಠ
ರಾಜ್ಯ ಸರ್ಕಾರ ಹಾಗೂ ಕೆಪಿಸಿಸಿಗೆ ತೀವ್ರ ತರಾಟೆ ತೆಗೆದುಕೊಂಡು ಶುಕ್ರವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್​ಗೆ ಹೇಗೆ ಪಾದಯಾತ್ರೆ ಮಾಡಲು ಅನುಮತಿಯನ್ನ ನೀಡಿದ್ದೀರಿ. ಕೊರೊನಾ ನಿಯಮ ಪಾಲಿಸಲು ಮಾರ್ಗಸೂಚಿಯನ್ನು ನೀಡಿದ್ದೀರಾ ಎಂದು ಪ್ರಶ್ನಿಸಿದೆ.

ಅದಕ್ಕೆ ಉತ್ತರಿಸಿದ ಸರ್ಕಾರ, ಪಾದಯಾತ್ರೆ ಸಂಬಂಧ ಎಫ್​ಐಆರ್ ಹಾಕಲಾಗಿದೆ. ಕೆಪಿಸಿಸಿಗೆ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿತು.

ಈ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್​, ವಾಸ್ತವವಾಗಿ ಆಗಿ ಏನು ಕ್ರಮ ತೆಗೆದುಕೊಂಡಿದ್ದೀರಿ? ಎಂದು ಪ್ರಶ್ನಿಸಿದೆ. ಮಾತ್ರವಲ್ಲ ಈ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಒಂದು ದಿನಗಳ ಕಾಲ ಡೆಡ್​ಲೈನ್ ನೀಡಿದೆ.

ಕೊರೊನಾ ಸಂದರ್ಭದಲ್ಲಿ ಹೇಗೆ ನೀವು ಪಾದಯಾತ್ರೆ ಮಾಡುತ್ತಿದ್ದೀರಿ. ಕೊರೊನಾ ನಿಯಮ ಪಾಲಿಸಲು ನೀವು ತೆಗೆದುಕೊಂಡಿರುವ ಕ್ರಮಗಳೇನು? ಕೊರೊನಾ ಮಾರ್ಗಸೂಚಿಯನ್ನು ಪಾದಯಾತ್ರೆಯಲ್ಲಿ ಪಾಲನೆ ಮಾಡುತ್ತಿದ್ದೀರಾ ಎಂದು ಕೆಪಿಸಿಸಿಗೆ ಪ್ರಶ್ನೆ ಮಾಡಿದೆ.

Share This Article
Leave a comment