ಸಂಬರಗಿ ವಿರುದ್ಧ ದೂರು ದಾಖಲು : ಅಧಿಕ ಬಡ್ಡಿಗೆ ಒತ್ತಾಯಿಸಿ, ಅವಹೇಳನ ಮಾಡಿದ ಆರೋಪ

Team Newsnap
1 Min Read

ಅಧಿಕ ಬಡ್ಡಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ವಾಟ್ ಸ್ಯಾಪ್ ನಲ್ಲಿ ಮಾನಹಾನಿ ಆಗುವ ರೀತಿಯಲ್ಲಿ ಮೆಸೇಜ್ ಕಳಿಸಿದ ಸಾಮಾಜಿಕ
ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ದೂರು ದಾಖಲಾಗಿದೆ.

ವೆಸ್ಟ್ ಆಫ್ ಕಾಡ್೯ ರಸ್ತೆ ನಿವಾಸಿ ವೈ ಕೆ ದೇವನಾಥ್ , ಸಂಬರಗಿ ಬಳಿ ಸಾಲ ಪಡೆದಿದ್ದರು. ಸಾಲವನ್ನು ಬಡ್ಡಿ ಸಮೇತ ಸಾಲ ಮರು ಪಾವತಿ ಮಾಡಿದ್ದರೂ ಶೇ. 10 ರಷ್ಟು ಬಡ್ಡಿ ನೀಡುವಂತೆ ಸಂಬರಗಿ ಒತ್ತಾಯ ಮಾಡಿ ದಾಖಲೆಗಳನ್ನು ಕೊಡದೇ ಸಿಸಿಬಿ ಪೋಲಿಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರು.

ಅಲ್ಲದೆ ವಾಟ್ ಸ್ಯಾಪ್ ಮೂಲಕ ನಾನು ಸಾಲ, ಬಡ್ಡಿ ಕೊಟ್ಟಿದ್ದರೂ ಸಹ ಸಾಲಗಾರ ಅಂತ ಮೆಸೇಜ್ ಕಳಿಸಿ ಅವಹೇಳನ ಮಾಡಿರುವುದಾಗಿ ದೇವನಾಥ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ದೂರು ಸ್ವೀಕರಿಸಿದ ಪೋಲಿಸರು ಐಪಿಸಿ ಸೆಕ್ಷನ್ 499, 500ರಂತೆ ಎಫ್ ಐ ಆರ್ ಹಾಕಲಾಗಿದೆ

ಸಂಬರಗಿ ವಿರುದ್ಧ ದೂರು ದಾಖಲು : ಅಧಿಕ ಬಡ್ಡಿಗೆ ಒತ್ತಾಯಿಸಿ, ಅವಹೇಳನ ಮಾಡಿದ ಆರೋಪ

ಅಧಿಕ ಬಡ್ಡಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ವಾಟ್ ಸ್ಯಾಪ್ ನಲ್ಲಿ ಮಾನಹಾನಿ ಆಗುವ ರೀತಿಯಲ್ಲಿ ಮೆಸೇಜ್ ಕಳಿಸಿದ ಸಾಮಾಜಿಕ
ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ದೂರು ದಾಖಲಾಗಿದೆ.

ವೆಸ್ಟ್ ಆಫ್ ಕಾಡ್೯ ರಸ್ತೆ ನಿವಾಸಿ ವೈ ಕೆ ದೇವನಾಥ್ , ಸಂಬರಗಿ ಬಳಿ ಸಾಲ ಪಡೆದಿದ್ದರು. ಸಾಲವನ್ನು ಬಡ್ಡಿ ಸಮೇತ ಸಾಲ ಮರು ಪಾವತಿ ಮಾಡಿದ್ದರೂ ಶೇ. 10 ರಷ್ಟು ಬಡ್ಡಿ ನೀಡುವಂತೆ ಸಂಬರಗಿ ಒತ್ತಾಯ ಮಾಡಿ ದಾಖಲೆಗಳನ್ನು ಕೊಡದೇ ಸಿಸಿಬಿ ಪೋಲಿಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರು.

ಅಲ್ಲದೆ ವಾಟ್ ಸ್ಯಾಪ್ ಮೂಲಕ ನಾನು ಸಾಲ, ಬಡ್ಡಿ ಕೊಟ್ಟಿದ್ದರೂ ಸಹ ಸಾಲಗಾರ ಅಂತ ಮೆಸೇಜ್ ಕಳಿಸಿ ಅವಹೇಳನ ಮಾಡಿರುವುದಾಗಿ ದೇವನಾಥ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ದೂರು ಸ್ವೀಕರಿಸಿದ ಪೋಲಿಸರು ಐಪಿಸಿ ಸೆಕ್ಷನ್ 499, 500ರಂತೆ ಎಫ್ ಐ ಆರ್ ಹಾಕಲಾಗಿದೆ

Share This Article
Leave a comment