ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಮೈಸೂರಿಗೆ ಭೇಟಿ ನೀಡುವರು.
- ಬೆಳಗ್ಗೆ ೧೦.೩೦ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡ ದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯುವರು.
- ಬೆಳಗ್ಗೆ ೧೧.೧೫ಕ್ಕೆ ಜಿಲ್ಲಾಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಕೋವಿಡ್-೧೯ ಕುರಿತು ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸುವರು.
- ಮಧ್ಯಾಹ್ನ ೧.೧೦ಕ್ಕೆ ಶ್ರೀ ಕ್ಷೇತ್ರ ಸುತ್ತೂರಿಗೆ ಭೇಟಿ ನೀಡಿದ ನಂತರ ೨.೧೫ಕ್ಕೆ ರಸ್ತೆಮಾರ್ಗವಾಗಿ ಬೆಂಗಳೂರಿಗೆ ತೆರಳುವರು.