ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ

Team Newsnap
1 Min Read

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಸನದ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ, ಹಾಸನಾಂಬೆ ದೇವಿಯ ದರ್ಶನ ಪಡೆದರು.

ಹಾಸನಾಂಬೆ ದರ್ಶನ ಪಡೆದು ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮುಂಗಾರು ಕೈಕೊಟ್ಟಿದೆ, ಹಿಂಗಾರಾದ್ರೂ ಬರಲಿ ಎಂದು ತಾಯಿ ಹಾಸನಾಂಬೆ ದೇವಿಯಲ್ಲಿ ಬೇಡಿಕೊಂಡಿದ್ದಾರೆ .

ಮುಂಗಾರು ಮಳೆ ರಾಜ್ಯದಲ್ಲಿ ಕೈಕೊಟ್ಟಿದೆ. ಈ ಕಾರಣದಿಂದಾಗಿ ಬರಗಾಲ ಆವರಿಸಿದೆ. ಕನಿಷ್ಠ ಪಕ್ಷ ಹಿಂಗಾರಾದ್ರೂ ಬರಲಿ ಎಂಬುದಾಗಿ ಹಾಸನಾಂಬೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋರಿಕೊಂಡಿದ್ದಾರೆ.

ಈ ವೇಳೆ ಸಿಎಂ ಸಿದ್ಧರಾಮಯ್ಯ ಅವರಿಗೆ ಸಚಿವ ಕೆ ಎನ್ ರಾಜಣ್ಣ, ಶಾಸಕ ಶಿವಲಿಂಗೇಗೌಡ ಸಾಥ್ ನೀಡಿದರು.

ಮುಂಗಾರು ಮಳೆ ಕೊರತೆಯಾಗಿ, ಹಿಂಗಾರು ಮಳೆ ಬಂದರೆ ದರ ಕರುಗಳಿಗೆ ಮೇವು ಆಗಲಿದೆ. ಈ ಕಾರಣದಿಂದಾಗಿ ರಾಜ್ಯದಲ್ಲಿ ಹಿಂಗಾರು ಮಳೆ ಬರುವಂತೆ ಮಾಡು ಹಾಸನಾಂಬೆ ತಾಯಿ ಎಂದು ಕೋರಿಕೊಂಡಿದ್ದಾಗಿ ತಿಳಿಸಿದರು.

Share This Article
Leave a comment