ಗೃಹ ಸಚಿವರ ಹೇಳಿಕೆ ಸಿಎಂ ಅತೃಪ್ತಿ: ಸಚಿವ ಆಗರ ಜ್ಞಾನೇಂದ್ರ ವಿಷಾದ

Team Newsnap
1 Min Read

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಆಡಿದ ಮಾತುಗಳು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗುತ್ತಲೇ ಸಚಿವರ ನಡೆಗೆ ಮುಖ್ಕಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಸಿಎಂ ಅರಗ ಜ್ಞಾನೇಂದ್ರಗೆ ಸೂಚಿಸಿದ ಪರಿಣಾಮ ಗೃಹ ಸಚಿವರು ವಿಷಾದಿಸಿದ್ದಾರೆ.

ನಾನು ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ತಾವು ಅವಳನ್ನು (ಸಂತ್ರಸ್ಥೆ) ತಮ್ಮ ಮಗಳ ಸ್ಥಾನದಲ್ಲಿ ನೋಡುತ್ತಿದ್ದೇನೆ. ಹಾಗಾಗಿ ಆತಂಕದಿಂದ ಆ ಮಾತುಗಳನ್ನು ವಾಪಸ್ ಪಡೆದುಕೊಂಡು ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಸಂಬಂಧ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹಸಚಿವರು, ಯುವಕ, ಯುವತಿ ಸಂಜೆ ೭.೩೦ರ ಸಮಯದಲ್ಲಿ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಎಂದು ಹೇಳಿದ್ದರು.

ಹಾಗೆಯೇ ಅವರು(ಕಾಂಗ್ರೆಸ್‌ನವರು) ನನ್ನ ರೇಪ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದಿದ್ದರು. ಇದಕ್ಕೆ ಕಾಂಗ್ರೆಸ್ ಕಟುವಾಗಿಯೇ ಪ್ರತಿಕ್ರಿಯಿಸಿತ್ತು.

Share This Article
Leave a comment