ಲಾಕ್ ಡೌನ್ ವಿಸ್ತರಣೆಗೆ ಸಿಎಂ‌ ನಿರ್ಧಾರ : ಕೆಲವು ವಿನಾಯಿತಿ ಸಾಧ್ಯತೆ

Team Newsnap
1 Min Read

ಕೆಲವು ವಿನಾಯಿತಿ ನೀಡಿ ಲಾಕ್ ಡೌನ್ ಅನ್ನು ಜೂನ್ 7 ನಂತರವೂ ವಿಸ್ತರಣೆ ಮಾಡುವುದು ಖಚಿತ. ಆದರೆ ವಿಸ್ತರಣೆ ರೂಪರೇಷೆಯನ್ನು ತಜ್ಞರು ಹಾಗೂ ಅಧಿಕಾರಿಗಳ‌ ಜೊತೆ ಚರ್ಚೆ ಮಾಡಿದ ನಂತರ ಪ್ರಕಟಿಸುವುದಾಗಿ‌ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ರಾಜ್ಯದ ಗ್ರಾಮೀಣ
ಭಾಗದಲ್ಲಿ ಕೊರೊನಾ ಸಂಫೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಆದ್ದರಿಂದ ಲಾಕ್​​​ಡೌನ್​ ಮುಂದುವರಿಯುತ್ತದೆ. ಆದರೆ ಎಷ್ಟು ದಿನ ಲಾಕ್​​ಡೌನ್ ಮುಂದುವರಿಸಬೇಕು? ಎಂಬ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡುತ್ತೇವೆ. ಯಾವುದೇ ತೀರ್ಮಾನವಾದರೂ ಇಂದಿನ ಸಭೆಯ ಬಳಿಕ ಮಾಹಿತಿ ನೀಡುತ್ತೇನೆ ಎಂದರು.

ಗುರುವಾರದಿಂದ ಕೈಗಾರಿಕೆಗಳ ರಫ್ತು ಘಟಕಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ಚರ್ಚೆ ಬಳಿಕವೇ ಅಂತಿಮ ನಿರ್ಧಾರ ಮಾಡಲಾಗುವುದು. ಮುಂದಿನ ಎರಡು ದಿನಗಳಲ್ಲಿ ಮತ್ತೊಂದು ಪ್ಯಾಕೇಜ್​ ಘೋಷಣೆ ಮಾಡುತ್ತೇವೆ. ಆದರೆ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್​​ಡೌನ್​​ಅನ್ನು ಮತ್ತಷ್ಟು ಕಠಿಣ ಮಾಡಿ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದರು.

Share This Article
Leave a comment