PSI ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಶನಿವಾರ ಸಿಐಡಿ(CID) ಅಧಿಕಾರಿಗಳು ಬೆಂಗಳೂರಿನ 7 ಕಡೆ ದಾಳಿ ನಡೆಸಿದ್ದಾರೆ. ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿರುವ 7 ಮಂದಿ ಆರೋಪಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.
ಕೋರ್ಟ್ ನಿಂದ ಅನುಮತಿ ಪಡೆದು ನಾಗರಭಾವಿಯಲ್ಲಿ ಮೂರು ಕಡೆ, ಆಡುಗೋಡಿ ಕ್ವಾರ್ಟಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹರ್ಷ, ನಾಗರಬಾವಿಯಲ್ಲಿರುವ ಶ್ರೀಧರ್, ಮಂಜುನಾಥ್ ಹಾಗೂ ಆಡುಗೋಡಿಯಲ್ಲಿರುವ ಡಿವೈಎಸ್ಪಿ ಶಾಂತಕುಮಾರ್ ಮನೆಯ ಮೇಲೆಯೂ ದಾಳಿ ಮಾಡಲಾಗಿದೆ.
ದಾಳಿ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಎಲ್ಲರ ಮನೆಯಲ್ಲೂ ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.