ಮುರುಘಾ ಶರಣರನ್ನು ಬಂಧಿಸುವಂತೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆದೇಶ

Team Newsnap
1 Min Read
  • ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಮತ್ತೆ ಕಾನೂನು ಸಂಕಷ್ಟ
  • 2ನೇ ಪೋಕ್ಸೋ ಕೇಸ್‌ನಲ್ಲಿ ಜಿಲ್ಲಾ ನ್ಯಾಯಾಯದಿಂದ ಅರೆಸ್ಟ್‌ ವಾರಂಟ್
  • ಮೊದಲ ಪೋಕ್ಸೋ ಕೇಸ್‌ನಲ್ಲಿ ಷರತ್ತು ಬದ್ಧ ಜಾಮೀನಿನಿಂದ ಬಿಡುಗಡೆ

ಚಿತ್ರದುರ್ಗ : ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ.

2ನೇ ಪೋಕ್ಸೋ ಕೇಸ್‌ನಲ್ಲಿ ಮುರುಘಾ ವಿರುದ್ಧ ಚಿತ್ರದುರ್ಗ ಜಿಲ್ಲಾ ನ್ಯಾಯಾಯದಿಂದ ಬಂಧನದ ‌ ವಾರಂಟ್ ಜಾರಿ ಮಾಡಿದೆ.

ಕಳೆದ 4 ದಿನದ ಹಿಂದಷ್ಟೇ ಶಿವಮೂರ್ತಿ ಶರಣರು ಜೈಲಿನಿಂದ ಬಿಡುಗಡೆ ಆಗಿದ್ದರು.

14 ತಿಂಗಳ ಬಳಿಕ ಜೈಲಿನಿಂದ ಹೊರ ಬಂದ ಮುರುಘಾ ಸ್ವಾಮೀಜಿ ಸದ್ಯ ದಾವಣಗೆರೆ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ಪಡೆದಿರುವ ಸ್ವಾಮೀಜಿಯನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸುವಂತೆ ಬಂಧಿಸುವಂತೆ ವಾರಂಟ್ ಜಾರಿಯಾಗಿದೆ.

ಎರಡನೇ ಪೋಕ್ಸೋ ಪ್ರಕರಣದಲ್ಲಿ ಅರೆಸ್ಟ್ ವಾರಂಟ್ ಜಾರಿ ಮಾಡಿರುವ ಕೋರ್ಟ್ ಕೂಡಲೇ ಬಂದಿಸುವಂತೆ ಆದೇಶ ನೀಡಿದೆ.ಕರುನಾಡ ಜಿಲ್ಲೆಗಳ ಕಿರು ಪರಿಚಯ -20-ದಕ್ಷಿಣ ಕನ್ನಡ

ಇವತ್ತು ಸಂಜೆಯೊಳಗೆ ವಿಚಾರಣೆಗೆ ಹಾಜರುಪಡಿಸಲು ಪೊಲೀಸ್ ಅಧಿಕಾರಿಗಳಿಗೆ ಕೋರ್ಟ್‌ ಸೂಚನೆ ನೀಡಿದೆ.

Share This Article
Leave a comment