ಚಿನ್ನಸ್ವಾಮಿ ಇನ್ನಿಲ್ಲ…

Team Newsnap
1 Min Read
Chinnaswamy is no more… ಚಿನ್ನಸ್ವಾಮಿ ಇನ್ನಿಲ್ಲ

ಚನ್ನರಾಯಪಟ್ಟಣ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ
ಹಿರೀಸಾವೆಯ ಹಿರಿಯ ಪತ್ರಕರ್ತರಾದ ಚಿನ್ನಸ್ವಾಮಿ (68)ಅವರು ಬುಧವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ, ಮೃತಪಟ್ಟಿದ್ದಾರೆ .

ಚಿನ್ನಸ್ವಾಮಿ ಅವರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಹಿರಿಸಾವೆಯಲ್ಲಿ ನಡೆಯಲಿದೆ.5 ಕೆಜಿ ಅಕ್ಕಿ ಬದಲು ಹಣ ನೀಡಲು ರಾಜ್ಯ ಸರ್ಕಾರ ನಿರ್ಧಾರ – ಸಿಎಂ ಸಿದ್ದರಾಮಯ್ಯ

ಕೆಯುಡಬ್ಲ್ಯೂಜೆ ಸಂತಾಪ:

ಗ್ರಾಮೀಣ ಪತ್ರಕರ್ತರಾಗಿ ಹಿರಿಸಾವೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಚಿನ್ನಸ್ವಾಮಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ. ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Share This Article
Leave a comment