ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಚಂದ್ರಶೇಖರ್ ನಿಧನ

Team Newsnap
1 Min Read

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಚಂದ್ರಶೇಖರ್ ನಿಧನರಾದರು. ಒಂದೇ ವಾರದಲ್ಲಿ ಇಬ್ಬರು ನಿರ್ಮಾಪಕರನ್ನು ಕನ್ನಡ ಚಿತ್ರರಂಗದ ಕಳೆದು ಕೊಂಡಂತಾಗಿದೆ.

23 ದಿನಗಳ ಹಿಂದೆ ಚಂದ್ರಶೇಖರ್​ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆ ಅವರನ್ನು ಮಣಿಪಾಲ್ ಸೆಂಟರ್​ಗೆ ದಾಖಲು ಮಾಡಲಾಗಿತ್ತು. ಕೋವಿಡ್ ವಾಸಿಯಾಗಿತ್ತು. , ಇದ್ದಕ್ಕಿದ್ದಂತೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡು ಕಳೆದ ರಾತ್ರಿ 11 ಗಂಟೆ ವೇಳೆಗೆ ಕೊನೆಯುಸಿರೆಳೆದರು.

ನಿಮಿಷಾಂಬ ಪ್ರೊಡಕ್ಷನ್ಸ್​ನ ನಿರ್ಮಾಪಕ ಚಂದ್ರಶೇಖರ್, ರವಿಚಂದ್ರನ್​ ಅಭಿನಯದ ಅಣ್ಣಯ್ಯ, ಪುನೀತ್​ ರಾಜ್​ಕುಮಾರ್​ ಅಭಿನಯದ ಬಿಂದಾಸ್, ಕಿಚ್ಚ ಸುದೀಪ್​ರ ರನ್ನ‌, ಏನೋ ಒಂಥರಾ.. ಸಿನಿಮಾಗಳನ್ನು ನಿರ್ಮಿಸಿದ್ದರು.

ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ನಟನೆಯ ಸಿನಿಮಾವೊಂದನ್ನು ನಿರ್ಮಿಸುವ ಪ್ರಕಟನೆ ಮಾಡಿದ್ದರು.

Share This Article
Leave a comment