ಸಿಡಿ ಪ್ರಕರಣ : ಕಮಿಷನರ್ ಸೇರಿ ಮೂವರು ಅಧಿಕಾರಿಗಳ ವಿರುದ್ದ ತನಿಖೆಗೆ ನ್ಯಾಯಾಲಯ ಆದೇಶ

Team Newsnap
1 Min Read

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಮೂವರು ಪೊಲೀಸ್​ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರು ಪೋಲಿಸ್ ಕಮಿಷನರ್​ ಕಮಲ್​ಪಂತ್​, ಡಿಸಿಪಿ ಅನುಚೇತ್​ ಹಾಗೂ ಕಬ್ಬನ್​ಪಾರ್ಕ್​ ಇನ್ಸ್​​ಪೆಕ್ಟರ್​ ಮಾರುತಿ ವಿರುದ್ಧ ತನಿಖೆ ನಡೆಸುವಂತೆ ನಗರದ 8ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ರಮೇಶ್​ ಜಾರಕಿಹೊಳಿ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ಥ ಯುವತಿ ದೂರು ನೀಡಿದ್ದರು.

ಕಬ್ಬನ್​ಪಾರ್ಕ್​ ಪೊಲೀಸರು ಎಫ್​ಐಆರ್​ ದಾಖಲಿಸದೇ ನಿರ್ಭಯ ಗೈಡ್​ಲೈನ್​ ಉಲ್ಲಂಘಿಸಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್​ನ ಅಧ್ಯಕ್ಷ ಆದರ್ಶ ಅಯ್ಯರ್​​ ಪಿಸಿಆರ್​ ದಾಖಲಿಸಿದ್ದರು

ಈ ದೂರಿನ ಆಧಾರದ ಮೇಲೆ ಮೂವರು ಅಧಿಕಾರಿಗಳ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿದೆ.

Share This Article
Leave a comment