ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ಹೆಸರು ಹೇಳಿ ವಂಚನೆ ಮಾಡಿದ ಆರೋಪಿ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ ಹೊರಿಸಲಾಗಿದೆ
ರಾಜ್ಯದ ಎಸಿಬಿ ಅಧಿಕಾರಿಗಳ ಮೂಲಕ ಪ್ರಕರಣದ ತನಿಖೆಯ ಜವಾಬ್ದಾರಿ ಸಿಬಿಐಗೆ ಹೆಗಲಿಗೆ ಬಿದ್ದಿದೆ . ಈ ಮೂಲಕ ಯುವರಾಜ್ ಸ್ವಾಮಿ ಪ್ರಕರಣ ರಾಷ್ಟ್ರ ಮಟ್ಟದ ಪ್ರಕರಣವಾಗಿದೆ.
ಅದರಲ್ಲೂ ಪ್ರಮುಖ ಎರಡು ಪ್ರಕರಣವನ್ನು ಎಸಿಬಿ ಟೀಂ, ಸಿಬಿಐಗೆ ವರ್ಗಾಯಿಸಿದೆ.
ಹೈಕೋರ್ಟ್ ನಿವೃತ್ತ ಜಡ್ಜ್ ಇಂದ್ರಕಲಾ ಅವರಿಗೆ ಸಂಬಂಧಿಸಿದ 8.7 ಕೋಟಿ ರೂಪಾಯಿ ಪ್ರಕರಣ ಹಾಗೂ ಬಿಜೆಪಿ ಮುಖಂಡ ಎನಿತ್ ಕುಮಾರ್ಗೆ ಸೇರಿದ 30 ಲಕ್ಷದ ಪ್ರಕರಣವನ್ನು ಸಿಬಿಐ, ಎಸಿಬಿ ನೀಡಿದೆ.
ಪ್ರಕರಣವನ್ನ ಸಿಬಿಐಗೆ ನೀಡುತ್ತಿರುವುದಾಗಿ ಎಸಿಬಿ ಅಧಿಕಾರಿಗಳು ದೂರುದಾರಿಗೆ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ.
ನಿಮ್ಮಿಬ್ಬರ ಕೇಸ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಹೀಗಾಗಿ ಪ್ರಕರಣವನ್ನು ಸಿಬಿಐಗೆ ನೀಡುತ್ತಿದ್ದೇವೆ ಎಂದು ಹಿಂಬದಿಯಲ್ಲಿ ಎಸಿಬಿ ಅಧಿಕಾರಿಗಳು ಬರೆದುಕೊಟ್ಟಿದ್ದಾರೆ.
5 ಮಂದಿಯ ವಿರುದ್ಧ ಲಂಚ ಕೊಟ್ಟ ಆರೋಪದಡಿ ದೂರು ನೀಡಲಾಗಿತ್ತು. ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಐಯ್ಯರ್ 5 ಮಂದಿಯ ವಿರುದ್ಧ ಭ್ರಷ್ಟಚಾರ ಆರೋಪ ಮಾಡಿ ದೂರು ನೀಡಿದ್ದರು
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ