ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ಹೆಸರು ಹೇಳಿ ವಂಚನೆ ಮಾಡಿದ ಆರೋಪಿ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ ಹೊರಿಸಲಾಗಿದೆ
ರಾಜ್ಯದ ಎಸಿಬಿ ಅಧಿಕಾರಿಗಳ ಮೂಲಕ ಪ್ರಕರಣದ ತನಿಖೆಯ ಜವಾಬ್ದಾರಿ ಸಿಬಿಐಗೆ ಹೆಗಲಿಗೆ ಬಿದ್ದಿದೆ . ಈ ಮೂಲಕ ಯುವರಾಜ್ ಸ್ವಾಮಿ ಪ್ರಕರಣ ರಾಷ್ಟ್ರ ಮಟ್ಟದ ಪ್ರಕರಣವಾಗಿದೆ.
ಅದರಲ್ಲೂ ಪ್ರಮುಖ ಎರಡು ಪ್ರಕರಣವನ್ನು ಎಸಿಬಿ ಟೀಂ, ಸಿಬಿಐಗೆ ವರ್ಗಾಯಿಸಿದೆ.
ಹೈಕೋರ್ಟ್ ನಿವೃತ್ತ ಜಡ್ಜ್ ಇಂದ್ರಕಲಾ ಅವರಿಗೆ ಸಂಬಂಧಿಸಿದ 8.7 ಕೋಟಿ ರೂಪಾಯಿ ಪ್ರಕರಣ ಹಾಗೂ ಬಿಜೆಪಿ ಮುಖಂಡ ಎನಿತ್ ಕುಮಾರ್ಗೆ ಸೇರಿದ 30 ಲಕ್ಷದ ಪ್ರಕರಣವನ್ನು ಸಿಬಿಐ, ಎಸಿಬಿ ನೀಡಿದೆ.
ಪ್ರಕರಣವನ್ನ ಸಿಬಿಐಗೆ ನೀಡುತ್ತಿರುವುದಾಗಿ ಎಸಿಬಿ ಅಧಿಕಾರಿಗಳು ದೂರುದಾರಿಗೆ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ.
ನಿಮ್ಮಿಬ್ಬರ ಕೇಸ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಹೀಗಾಗಿ ಪ್ರಕರಣವನ್ನು ಸಿಬಿಐಗೆ ನೀಡುತ್ತಿದ್ದೇವೆ ಎಂದು ಹಿಂಬದಿಯಲ್ಲಿ ಎಸಿಬಿ ಅಧಿಕಾರಿಗಳು ಬರೆದುಕೊಟ್ಟಿದ್ದಾರೆ.
5 ಮಂದಿಯ ವಿರುದ್ಧ ಲಂಚ ಕೊಟ್ಟ ಆರೋಪದಡಿ ದೂರು ನೀಡಲಾಗಿತ್ತು. ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಐಯ್ಯರ್ 5 ಮಂದಿಯ ವಿರುದ್ಧ ಭ್ರಷ್ಟಚಾರ ಆರೋಪ ಮಾಡಿ ದೂರು ನೀಡಿದ್ದರು